ಪುತ್ತೂರು : ಯೂನಿಯನ್ ಬ್ಯಾಂಕ್ ಉಪ್ಪಿನಂಗಡಿ ಶಾಖೆಯಲ್ಲಿ ಎಟೆಂಡರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಎಸ್.ಕೆ.ಚಂದ್ರಾವತಿ ರವರು ಜೂ.30ರಂದು ಕರ್ತವ್ಯದಿಂದ ನಿವೃತ್ತಿ ಹೊಂದಿದ್ದಾರೆ. ಚಿಕ್ಕಮುಡ್ನೂರು ಗ್ರಾಮದ ಬಡಾವು ನಿವಾಸಿಯಾದ ಇವರು 2005ರಲ್ಲಿ ಉಪ್ಪಿನಂಗಡಿ ಶಾಖೆಯಲ್ಲಿ ಸ್ವೀಪರ್ ಆಗಿ ಕರ್ತವ್ಯಕ್ಕೆ ಸೇರಿ 17 ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದಾರೆ. ಇವರು ಪತಿ ಪುತ್ತೂರು ಮಹಮ್ಮಾಯಿ ದೇವಾಲಯದ ಬಳಿಯಲ್ಲಿ ಕ್ಯಾಂಟೀನ್ ನಡೆಸುತ್ತಿರುವ ಲೋಕಯ್ಯ ನಾಯ್ಕ, ಪುತ್ರಿಯರಾದ ಸೌಮ್ಯ, ಸ್ಮಿತಾ, ಶಿಲ್ಪಾರವರನ್ನು ಹೊಂದಿದ್ದಾರೆ.