ಪುತ್ತೂರು; ಸರ್ವೆ ಗ್ರಾಮದ ಕೂಡುರಸ್ತೆಯಲ್ಲಿರುವ ನೌಶಾದ್ ಎಂಬವರ ಮನೆಯ ಒಂದು ಬದಿಯಲ್ಲಿ ಧರೆ ಕುಸಿದು ಮನೆ ಅಪಾಯದಲ್ಲಿದೆ. ವಿಪರೀತ ಮಳೆಯ ಹಿನ್ನೆಲೆಯಲ್ಲಿ ಕಳೆದ ಎರಡು ದಿನಗಳ ಹಿಂದೆ ಈ ಅವಘಡ ಸಂಭವಿಸಿದೆ. ಧರೆ ಕುಸಿದ ಕಾರಣ ಮನೆಯ ಹಿಂಭಾಗದ ಗೋಡೆ ಬಿರುಕುಬಿಟ್ಟಿದ್ದು ಅಪಾಯದ ಸನ್ನಿವೇಶ ಉಂಟಾಗಿದೆ. ಘಟನೆಯ ಕುರಿತು ಮುಂಡೂರು ಗ್ರಾಮಕರಣಿಕರಿಗೆ ಮಾಹಿತಿ ನೀಡಲಾಗಿದ್ದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.