ಅಧ್ಯಕ್ಷರಾಗಿ ಪಾವನರಾಮ, ಕಾರ್ಯದರ್ಶಿ ಜಗನ್ನಾಥ್ ರೈ ಗುತ್ತು, ಕೋಶಾಧಿಕಾರಿ ಕೃಷ್ಣರಾಜ್
ಪುತ್ತೂರು: ಪುತ್ತೂರು-ಕಾವು ಲಯನ್ಸ್ ಕ್ಲಬ್ ಇವರ 2022-23 ನೇ ಸಾಲಿನ ನೂತನನ ಅಧ್ಯಕ್ಷರಾಗಿ ಪಾವನರಾಮ ಅವರನ್ನು ಎರಡನೇ ಬಾರಿಗೆ ನೇಮಕ ಮಾಡಲಾಯಿತು. ಕಾರ್ಯದರ್ಶಿಯಾಗಿ ಜಗನ್ನಾಥ ರೈ , ಕೋಶಾಧಿಕಾರಿಯಾಗಿ ಕೃಷ್ಣರಾಜ್, ಪ್ರಥಮ ಉಪಾಧ್ಯಕ್ಷರಾಗಿ ದಿವ್ಯನಾಥ ಶೆಟ್ಟಿ ಕಾವು, ದ್ವಿತೀಯ ಉಪಾಧ್ಯಕ್ಷರಾಗಿ ಮೋಹನದಾಸ ಶೆಟ್ಟಿ, ತೃತೀಯ ಉಪಾಧ್ಯಕ್ಷರಾಗಿ ಮಹೇಶ್ ರೈ ಎ, ಸದಸ್ಯತನ ಚೆಯರ್ಮೆನ್ ಆಗಿ ದೇವಣ್ಣ ರೈ, ಮಾರ್ಕೆಂಟಿಂಗ್ ಮತ್ತು ಕಮ್ಯುನಿಕೇಷನ್ ಸರ್ವಿಸ್ ಚೆಯರ್ ಮೆನ್ ಆಗಿ ಅನಿತಾ ಎಚ್ ಶೆಟ್ಟಿ, ಕ್ಲಬ್ ಸರ್ವಿಸ್ ಚೆಯರ್ಮೆನ್ ಆಗಿ ಅಮ್ಮು ರೈ, ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಉದನೇಶ್ವರ ಭಟ್, ಕೋಆರ್ಡಿನೇಟರ್ ಆಗಿ ಮೋನಪ್ಪ ಪೂಜಾರಿ, ಕ್ಲಬ್ ಟೇಮರ್ ಆಗಿ ಜಗನ್ನಾಥ ರೈ ಡೆಂಬಾಳೆ, ಟೈಲ್ ಟ್ವಿಸ್ಟರ್ ಆಗಿ ರಮೇಶ್ ಆಳ್ವ, ಕೋಆರ್ಡಿನೇಟರ್ ಆಗಿ ಅಬ್ದುಲ್ ಖಾದರ್ ಹಾಜಿ, ನಿರ್ದೇಶಕರಾಗಿ ಜಯಪ್ರಕಾಶ್ ರೈ ನೂಜಿಬೈಲು,ಅಬ್ದುಲ್ ಅಝೀಝ್ ಬುಶ್ರಾ, ಕೆ ಕೆ. ಇಬ್ರಾಹಿಂ, ದಿನೇಶ್ ಗೌಡ, ಕುಶಾಲಪ್ಪ ಗೌಡ ಅವರನ್ನು ನೇಮಿಸಲಾಯಿತು. ಸಭೆಯಲ್ಲಿ ನಿಕಟಪೂರ್ವ ಪ್ರಾಂತೀಯ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ವಲಯಾಧ್ಯಕ್ಷ ರಮೇಶ್ ರೈ ಸಾಂತ್ಯ ಮೊದಲಾದವರು ಉಪಸ್ಥಿತರಿದ್ದರು.