ಪುತ್ತೂರು: ವಿವಾಹಿತ ಮಹಿಳೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪದಲ್ಲಿ ಮಾಜಿ ಸೈನಿಕಯೋರ್ವರನ್ನು ಸಂಪ್ಯ ಪೊಲೀಸರು ಬಂಧಿಸಿದ ಬಗ್ಗೆ ವರದಿಯಾಗಿದೆ. ಕಾವುನಲ್ಲಿರುವ ಖಾಸಾಗಿ ಸಂಸ್ಥೆಯಲ್ಲಿ ಉದ್ಯೋಗಿಯಾಗಿರುವ ತಿಂಗಳಾಡಿ ನಿವಾಸಿಯಾಗಿರುವ ವಿವಾಹಿತ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ನೀಡಿದ ದೂರಿನಂತೆ ಕುಂಬ್ರ ಕುರಿಕ್ಕಾರ ನಿವಾಸಿ ಮಾಜಿ ಸೈನಿಕ ವಿದೀಪ್ ಕುಮಾರ್ ಎಂಬವರನ್ನು ಜು.17 ರಂದು ಸಂಪ್ಯ ಪೊಲೀಸರು ಬಂಧಿಸಿದ್ದಾರೆ.
ಘಟನೆಯ ಸಾರಾಂಶ
ತಿಂಗಳಾಡಿ ನಿವಾಸಿ ವಿವಾಹಿತ ಮಹಿಳೆ ಕಾವುನಲ್ಲಿರುವ ಖಾಸಾಗಿ ಸಂಸ್ಥೆಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡಿಕೊಂಡಿದ್ದು ಇದೇ ಸಂಸ್ಥೆಯಲ್ಲಿ ವಿದೀಪ್ ಕುಮಾರ್ ಕೂಡ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡಿಕೊಂಡಿದ್ದರು. ವಿದೀಪ್ ಕುಮಾರ್ರವರು ಮಹಿಳೆಯೊಂದಿಗೆ ಸಲುಗೆಯಿಂದ ಮಾತನಾಡಲು ಪ್ರಯತ್ನಿಸುತ್ತಿದ್ದು ಆದರೆ ಮಹಿಳೆ ಈತನಲ್ಲಿ ಹೆಚ್ಚು ಮಾತನಾಡುತ್ತಿರಲಿಲ್ಲ, ಜು.16 ರಂದು ಸಂಜೆ ಮಹಿಳೆ ಕೆಲಸ ಮುಗಿಸಿಕೊಂಡು ಕುಂಬ್ರದಿಂದ ತಿಂಗಳಾಡಿಯವರೇಗೆ ಬಸ್ಸುನಲ್ಲಿ ಬಂದು ಅಲ್ಲಿಂದ ಮನೆ ಕಡೆಗೆ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ವಿದೀಪ್ ಕುಮಾರನು ತನ್ನ ಮೋಟಾರ್ ಬೈಕ್ನಲ್ಲಿ ಹಿಂಬಾಲಿಸಿಕೊಂಡು ಬಂದು ಸಂಜೆ ೬.೧೫ ರ ವೇಳೆಗೆ ತಿಂಗಳಾಡಿ ದರ್ಬೆ ಎಂಬಲ್ಲಿ ಬೈಕ್ ನಿಲ್ಲಿಸಿ ಮಹಿಳೆಯನ್ನು ಅಡ್ಡಗಟ್ಟಿ ಮಾತನಾಡಲು ಯತ್ನಿಸಿದ್ದಾನೆ.ಇದಲ್ಲದೆ ನನಗೆ ನೀನು ಬೇಕು, ನಾನು ನಿನಗೋಸ್ಕರ ಯಾರನ್ನು ಬೇಕಾದರೂ ಬಿಟ್ಟು ಬಡುತ್ತೇನೆ. ನೀನು ನನ್ನ ಜೊತೆ ಬರಬೇಕು ಎಂಬಿತ್ಯಾದಿ ಮಾತುಗಳಿಂದ ಮರುಳು ಮಾಡಲು ಯತ್ನಿಸಿದ್ದು ಅಲ್ಲದೆ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ. ಈ ಸಮಯದಲ್ಲಿ ಜನರು ಬರುತ್ತಿರುವುದನ್ನು ಕಂಡು ವಿದೀಪ್ ಕುಮಾರ್ ತನ್ನ ಬೈಕ್ನಲ್ಲಿ ಸ್ಥಳದಿಂದ ಹೊರಟು ಹೋಗಿದ್ದಾನೆ, ನನ್ನ ಹಿಂಬಾಲಿಸಿಕೊಂಡು ಬಂದಿದ್ದು ಅಲ್ಲದೆ ತಡೆದು ನಿಲ್ಲಿಸಿ ಅಸಭ್ಯವಾಗಿ ವರ್ತಿಸಿದ್ದಾನೆ, ಆದ್ದರಿಂದ ಆತನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ. ಆರೋಪಿ ವಿದೀಪ್ ಕುಮಾರ್ ವಿರುದ್ಧ ಸಂಪ್ಯ ಪೊಲೀಸರು 79/2022 ಕಲಂ 345(ಡಿ)341 ಐಪಿಸಿ ಸೆಕ್ಷನ್ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.