ಪುತ್ತೂರು : ಸಂಸ್ಕಾರ ಭಾರತಿ, ದ.ಕ.ಜಿಲ್ಲೆಯ ಪುತ್ತೂರು ತಾಲೂಕು ಘಟಕದ ವತಿಯಿಂದ ಗುರುಪೂರ್ಣಿಮೆ ಆಚರಣೆ ಸಂದರ್ಭದಲ್ಲಿ ಪಾಲ್ತಾಡಿ ಗ್ರಾಮದ ಬಂಬಿಲ ನಿವಾಸಿ ಪಾಡ್ದನ ಕಲಾವಿದೆ ಮುದರುರವರನ್ನು ಅವರ ನಿವಾಸದಲ್ಲಿ ಗೌರವಿಸಲಾಯಿತು.
ಸಂಸ್ಕಾರ ಭಾರತಿ ಜಿಲ್ಲಾ ಉಪಾಧ್ಯಕ್ಷೆ ರೂಪಲೇಖಾ, ಜಿಲ್ಲಾ ಸಂಘಟಕ ವಿದ್ವಾನ್ ದೀಪಕ್ ಕುಮಾರ್, ಜಿಲ್ಲಾ ನೃತ್ಯ ವಿಧಾ ಪ್ರಮುಖ್ ವಿದುಷಿ ನಯನಾ ವಿ. ರೈ, ವಿಧಾ ಪ್ರಮುಖರಾದ ಪದ್ಮಾ ಆಚಾರ್, ಶಂಕರಿ ಶರ್ಮ, ವಿದ್ವಾನ್ ಗೋಪಾಲಕೃಷ್ಣ, ತಾರಾ ಬಲ್ಲಾಳ್ ಉಪಸ್ಥಿತರಿದ್ದರು. ಮುದರು ಅವರು ಹಾಡಿದ ಹಲವು ಪಾಡ್ದನ ಹಾಗೂ ಸಂದಿ ಹಾಡುಗಳನ್ನು ಚಿತ್ರೀಕರಿಸಲಾಯಿತು.
ವಿದುಷಿ ನಯನಾ ವಿ.ರೈ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ವಂದಿಸಿದರು.