ಪುತ್ತೂರು: ನಗರಸಭೆ ಮತ್ತು ಮೆಸ್ಕಾಂ ಜಂಟಿ ಕಾರ್ಯದಿಂದ ಶಾಸಕರ ಸೂಚನೆಯಂತೆ ಎಪಿಎಂಸಿ ರಸ್ತೆಯ ಬಳಿ ವಿದ್ಯುತ್ ತಂತಿಗಳ ಮೇಲೆ ಮತ್ತು ಮನೆಯೊಂದರ ಬೀಳುವ ಸ್ಥಿತಿಯಲ್ಲಿದ್ದ ಅಪಾಯಕಾರಿ ಮರವನ್ನು ತೆರವುಗೊಳಿಸುವ ಕಾರ್ಯಾಚರಣೆ ಜು.22ರಂದು ನಡೆಯಿತು.
ಎಪಿಎಂಸಿ ರಸ್ತೆಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ರಾಮದಾಸ್ ಗೌಡ ಅವರ ಮನೆಯ ಬಳಿ ಬೀಳುವ ಹಂತದಲ್ಲಿದ್ದ ಅಪಾಯಕಾರಿ ಮರವನ್ನು ತೆರವು ಗೊಳಿಸುವ ಕುರಿತು ಶಾಸಕರಿಗೆ ಮನವಿ ಸಲ್ಲಿಸಲಾಗಿತ್ತು. ಶಾಸಕರು ಈ ಕುರಿತು ಸಂಬಂಧಿಸಿ ಇಲಾಖೆಗೆ ಪರಿಶೀಲಿಸಿ ಅಪಾಯಕಾರಿ ಮರವನ್ನು ತೆರವುಗೊಳಿಸುವಂತೆ ಸೂಚಿಸಿದ್ದರು. ಅದರಂತೆ ನಗರಸಭೆ ಮತ್ತು ಮೆಸ್ಕಾಂ ವತಿಯಿಂದ ಮರ ತೆರವು ಕಾರ್ಯಾಚರಣೆ ನಡೆಯುತ್ತಿದೆ. ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್, ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ರಾಮಚಂದ್ರ ಸ್ಥಳಕ್ಕೆ ಭೇಟಿ ನೀಡಿ ತೆರವು ಕಾರ್ಯಾಚರಣೆ ಸಂದರ್ಭ ಉಪಸ್ಥಿತರಿದ್ದರು.