ಪುತ್ತೂರು : ಬೆಳ್ಳಾರೆಯ ಕಳಂಜ ಎಂಬಲ್ಲಿ ತಂಡದಿಂದ ಹಲ್ಲೆಗೊಳಗಾಗಿ ಸಾವಿಗೀಡಾಗಿರುವ ಯುವಕ ಮಸೂದ್ ಅವರ ಮನೆಗೆ ಕೆಪಿಸಿಸಿ ಸಂಯೋಜಕರಾದ ಕಾವು ಹೇಮನಾಥ ಶೆಟ್ಟಿಯವರು ಭೇಟಿಕೊಟ್ಟು ಸಾಂತ್ವನ ಕುಟುಂಬದವರಿಗೆ ಆತ್ಮಸ್ಥೈರ್ಯ ತುಂಬಿದರು.
ಸಮಾಜದಲ್ಲಿ ಈ ತರಹದ ಘಟನೆಗಳು ಇನ್ನು ಮುಂದಕ್ಕೆ ನಡೆಯಬಾರದು ಎಂದ ಅವರು ಮಸೂದ್ ಕುಟುಂಬಕ್ಕೆ ಸುಮಾರು 25 ಲಕ್ಷ ರೂ. ಪರಿಹಾರ ನೀಡುವಂತೆ ಸರ್ಕಾರಕ್ಕೆ ಆಗ್ರಹಿಸಿದರು.
ಜಿಲ್ಲಾ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಅಧ್ಯಕ್ಷ ಸಚಿನ್ ರಾಜ್ ಶೆಟ್ಟಿ ರಾಜ್ಯ NSUI ಉಪಾಧ್ಯಕ್ಷ ಫಾರೂಕ್ ಬಾಯಬೆ, ಯುವ ಕಾಂಗ್ರೆಸ್ ಉಪಾಧ್ಯಕ್ಷರಾದ ಹನೀಫ್ ಪುಂಚತ್ತಾರ್, ಮಾಜಿ ನಗರಸಭಾ ಸದಸ್ಯರಾದ ಅನ್ವರ್ ಖಾಸಿಂ ಸಾಲ್ಮರ, ಕಬಕ ವಲಯ ಕಾಂಗ್ರೆಸ್ ಅಧ್ಯಕ್ಷರಾದ ದಾಮೋದರ್ ಮುರ, ಕಾಂಗ್ರೆಸ್ ಮುಖಂಡರಾದ ಗಂಗಾದರ ಶೆಟ್ಟಿ ಎಲಿಕ ಹಾಗೂ ಯುವ ಕಾಂಗ್ರೆಸ್ ಮುಖಂಡರಾದ ಶಾನ್ವಾಜ್ಹ್ ಬಪ್ಪಳಿಗೆ, ಯುವ ಕಾಂಗ್ರೆಸ್ ಮುಖಂಡರಾದ ಅಶ್ರಫ್ ಪೆರ್ಲಂಪಾಡಿ, ಅಝೀರh ಕಳಂಜ, ಶಾಫಿ ಕಳಂಜ ಉಪಸ್ಥಿತರಿದ್ದರು.