ಪುತ್ತೂರು: ಮದ್ಯ ಸೇವನೆಯ ಆರೋಪದಿಂದ ಮುಂಡೂರು ಮೃತ್ಯುಂಜಯೇಶ್ವರ ದೇವಸ್ಥಾನದಿಂದ ಕೆಲಸ ಕಳೆದುಕೊಂಡ ಶಿರಸಿ ಮೂಲದ ಸಹಾಯಕ ಅರ್ಚಕರೊಬ್ಬರು ಪಾನಮತ್ತರಾಗಿ ದರ್ಬೆ ವೃತ್ತದಲ್ಲಿ ತೂರಾಡುತ್ತಿರುವುದನ್ನು ಗಮನಿಸಿದ ಹೊಯ್ಸಳ 112 ಪೊಲೀಸರು ಅವರನ್ನು ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದಿದ್ದಾರೆ.
ಕಳೆದ 8 ತಿಂಗಳ ಹಿಂದೆಯಷ್ಟೆ ಪುತ್ತೂರು ಮೃತ್ಯುಂಜಯೇಶ್ವರ ದೇವಸ್ಥಾನದಲ್ಲಿ ಸಹಾಯಕ ಅರ್ಚಕರಾಗಿ ಸೇರಿಕೊಂಡ ಶಿರಸಿ ಮೂಲದ ಅರ್ಚಕರೊಬ್ಬರು ಮದ್ಯ ಸೇವನೆ ಮಾಡುವುದನ್ನು ಗಮನಿಸಿ ತಿಂಗಳ ಹಿಂದೆ ಅವರನ್ನು ಕೆಲಸದಿಂದ ತೆರವು ಮಾಡಲಾಗಿತ್ತು. ಅವರು ಊರಿಗೆ ಹೋಗದೆ ಪುತ್ತೂರಿನಲ್ಲೇ ಇದ್ದರು. ಜು.24 ರಂದು ರಾತ್ರಿ ದರ್ಬೆ ವೃತ್ತದಲ್ಲಿ ಅವರು ತೂರಾಡುತ್ತಿರುವುದನ್ನು ಗಮನಿಸಿದ ಪೊಲೀಸರು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.