ಉಪ್ಪಿನಂಗಡಿ: ಹಿಂದೂ ವರ್ತಕರ ಅಂಗಡಿಗಳು ಬಂದ್

0

ಉಪ್ಪಿನಂಗಡಿ: ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಅವರನ್ನು ದುಷ್ಕರ್ಮಿಗಳು ಹತ್ಯೆ ಮಾಡಿರುವುದನ್ನು ಖಂಡಿಸಿ ಹಿಂದೂಪರ ಸಂಘಟನೆಗಳ ಬಂದ್ ಕರೆಗೆ ಉಪ್ಪಿನಂಗಡಿಯಲ್ಲಿ ಹಿಂದೂ ವರ್ತಕರಿಂದ ಬೆಂಬಲ ವ್ಯಕ್ತವಾಗಿದೆ.

ಹಿಂದೂ ವರ್ತಕರು ತಮ್ಮ ಅಂಗಡಿ- ಮುಂಗಟ್ಟುಗಳನ್ನೆಲ್ಲಾ ಬಂದ್ ಮಾಡಿದ್ದಾರೆ. ಹಿಂದೂ ವರ್ತಕರ ಅಂಗಡಿಗಳು ಬಂದ್ ಆಗಿರುವುದು ಬಿಟ್ಟರೆ, ಖಾಸಗಿ ವಾಹನ ಸಂಚಾರ, ಸಾರ್ವಜನಿಕರ ಓಡಾಟ ಎಂದಿನಂತಿವೆ. ಅಲ್ಲದೆ, ಕೆಎಸ್ಸಾರ್ಟಿಸಿ, ಖಾಸಗಿ ಬಸ್, ಜೀಪು, ರಿಕ್ಷಾ ಸಂಚಾರವೂ ಅಬಾಧಿತವಾಗಿವೆ.

LEAVE A REPLY

Please enter your comment!
Please enter your name here