ಚಿತ್ರ: ಯೂಸುಫ್ ರೆಂಜಲಾಡಿ
ಪುತ್ತೂರು: ಉಪಯೋಗಿಸಿದ ಕಾರುಗಳ ನೂತನ ಶೋರೂಂ `ಕಾರ್ ಸೂಕ್’ ಕಲ್ಲೇಗ ಜುಮಾ ಮಸೀದಿ ಬಳಿ ಆ.೪ರಂದು ಶುಭಾರಂಭಗೊಂಡಿತು. ಸಂಸ್ಥೆಯನ್ನು ಈಶ್ವರಮಂಗಲ ಜುಮಾ ಮಸೀದಿಯ ಖತೀಬ್ ಸಯ್ಯದ್ ಎನ್ಪಿಎಂ ಜಲಾಲುದ್ದೀನ್ ತಂಙಳ್ ರಿಬ್ಬನ್ ತುಂಡರಿಸುವ ಮೂಲಕ ಉದ್ಘಾಟಿಸಿ ಶುಭ ಹಾರೈಸಿದರು.
ಕಲ್ಲೇಗ ಜುಮಾ ಮಸೀದಿಯ ಮುದರ್ರಿಸ್ ಅಬೂಬಕ್ಕರ್ ಸಿದ್ದೀಕ್ ಜಲಾಲಿ, ಮೇನಾಲ ಮಧುರಾ ಇಂಟರ್ನ್ಯಾಶನಲ್ ಸ್ಕೂಲ್ನ ನಿರ್ದೇಶಕರಾದ ಅಬ್ದುಲ್ ರಹಿಮಾನ್ ಹಾಜಿ ಮೇನಾಲ, ಅಧ್ಯಕ್ಷ ಹನೀಫ್ ಮಧುರಾ, ಕಲ್ಲೇಗ ಮಸೀದಿಯ ಅಧ್ಯಕ್ಷ ಕೆ.ಪಿ ಮಹಮ್ಮದ್ ಹಾಜಿ, ಗೌರವಾಧ್ಯಕ್ಷ ಬಿ.ಎ ಶಕೂರ್ ಹಾಜಿ, ನಗರಸಭಾ ಸದಸ್ಯ ಶಿವರಾಮ್, ನ್ಯಾಯವಾದಿ ಸಿದ್ದೀಕ್ ಹಾಜಿ ಕಲ್ಲೇಗ, ಕಾಂಗ್ರೆಸ್ ಮುಖಂಡ ಇಸಾಕ್ ಸಾಲ್ಮರ, ಹಸೈನಾರ್ ಬನಾರಿ, ಜೆಡಿಎಸ್ ಜಿಲ್ಲಾ ಮುಖಂಡ ಮಹಮ್ಮದ್ ಕುಂಞಿ ವಿಟ್ಲ, ಜೆಡಿಎಸ್ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಅಶ್ರಫ್ ಕಲ್ಲೇಗ, ಡಾ.ಕೃಷ್ಣ ಪ್ರಸಾದ್, ಮುತ್ತೂಟ್ ಫೈನಾನ್ಸ್ನ ಸಂದೇಶ್ ಶೆಣೈ, ಇ.ಎ ಮಹಮ್ಮದ್ ಕುಂಞಿ ಈಶ್ವರಮಂಗಲ, ಅಬ್ದುಲ್ ರಹಿಮಾನ್ ಮುಸ್ಲಿಯಾರ್ ಕಬಕ, ನೆ.ಮುಡ್ನೂರು ಗ್ರಾ.ಪಂ ಸದಸ್ಯ ರಿಯಾಝ್, ಎ.ಎಚ್ ಅಬು ಮೇನಾಲ, ಅಬ್ದುಲ್ ರಹಿಮಾನ್ ಹಾಜಿ ಸಕಲೇಶಪುರ, ಖಲಂದರ್ ಕಬಕ, ಅಬ್ಬಾಸ್ ಹಾಜಿ ಸಕಲೇಶಪುರ, ಖಾಸಿಂ ಪರ್ಲಡ್ಕ, ಯೂಸುಫ್ ಫೈವ್ಸ್ಟಾರ್, ರಫೀಕ್ ಝೆನ್, ಸತ್ತಾರ್ ಮೇನಾಲ ಮತ್ತಿತರ ಹಲವಾರು ಮಂದಿ ಆಗಮಿಸಿ ಶುಭ ಹಾರೈಸಿದರು.
ಪಾಲುದಾರರಾದ ಮುಸ್ತಫಾ ಮೇನಾಲ ಹಾಗೂ ಇಬ್ರಾಹಿಂ ಕಲ್ಲೇಗ ಮಾತನಾಡಿ ಮಾತನಾಡಿ
ನಮ್ಮಲ್ಲಿ ಎಲ್ಲಾ ವಿಧದ ಉಪಯೋಗಿಸಿದ ಕಾರುಗಳ ಖರೀದಿ, ಮಾರಾಟ ಮತ್ತು ವಿನಿಮಯಕ್ಕೆ ಅವಕಾಶವಿದ್ದು ಹೆಚ್ಚಿನ ಮಾಹಿತಿಗಾಗಿ ಮೊ: 9667755544, 9448726193 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ ಎಂದು ಹೇಳಿ ಗ್ರಾಹಕರ ಸಹಕಾರ ಕೋರಿದರು.