ಪುತ್ತೂರು: ಒಳಮೊಗ್ರು ಗ್ರಾಮದ ಕುಂಬ್ರದಲ್ಲಿ ನೂತನವಾಗಿ ಬಾಂತಲಪ್ಪು ಜನ ಸೇವಾ ಸಮಿತಿಯನ್ನು ರಚನೆ ಮಾಡಲಾಗಿದೆ. ಸಮಿತಿಯ ಗೌರವಾಧ್ಯಕ್ಷರಾಗಿ ನ್ಯಾಯವಾದಿ ಕುಂಬ್ರ ದುರ್ಗಾಪ್ರಸಾದ್ ರೈ, ಅಧ್ಯಕ್ಷರಾಗಿ ರಕ್ಷಿತ್ ರೈ ಮುಗೇರು, ಉಪಾಧ್ಯಕ್ಷರಾಗಿ ವಿನೋದ್ ಶೆಟ್ಟಿ ಮುಡಾಲ, ಪ್ರಧಾನ ಕಾರ್ಯದರ್ಶಿಯಾಗಿ ಅಶೋಕ ಪೂಜಾರಿ ಬೊಳ್ಳಾಡಿ, ಕೋಶಾಧಿಕಾರಿಯಾಗಿ ಯು ಕೆ ಅಶ್ರಫ್ ಉಜಿರೋಡಿ ಹಾಗೂ ಸಂಚಾಲಕರಾಗಿ ಶಶಿಕಿರಣ್ ರೈ ನೂಜಿಬೈಲು ಅವರನ್ನು ನೇಮಕ ಮಾಡಲಾಗಿದೆ. ನೂತನ ಸಮಿತಿಗೆ ಕಾರ್ಯಕಾರಿ ಸಮಿತಿ ಸದಸ್ಯರನ್ನು ಶೀಘ್ರವೇ ನೇಮಕ ಮಾಡಲಾಗುವುದು ಎಂದು ಅಧ್ಯಕ್ಷ ರಕ್ಷಿತ್ ರೈ ಮುಗೇರು ತಿಳಿಸಿದ್ದಾರೆ. ಜನಸೇವಾ ಸಮಿತಿಯ ಮೊದಲ ಕಾರ್ಯಕ್ರಮವಾಗಿ ಒಳಮೊಗ್ರು ಗ್ರಾಮದಲ್ಲಿ ಎಸ್ಎಸ್ಎಲ್ಸಿ, ಪಿಯುಸಿ, ಪದವಿ, ಮತ್ತು ಸ್ನಾತಕೋತ್ತರ ಪರೀಕ್ಷೆಗಳಲ್ಲಿ ಉತ್ತಮ ಅಂಕಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಮತ್ತು ಸ್ಕಾಲರ್ ಶಿಪ್ ವಿತರಣಾ ಕಾರ್ಯಕ್ರಮ ಆ. ೧೪ ರಂದು ಕುಂಬ್ರದಲ್ಲಿ ನಡೆಯಲಿದೆ.
ಕುಂಬ್ರಕ್ಕೆ ಇದ್ದ ಹಳೆಯ ಹೆಸರು ಬಾಂತಲಪ್ಪು ಎಂಬ ಹೆಸರನ್ನು ನೂತನ ಸಮಿತಿಗೆ ನಾಮಕರಣ ಮಾಡಲಾಗಿದ್ದು ಈ ಸಮಿತಿಯಲ್ಲಿ ಯಾವುದೇ ಜಾತಿ, ಧರ್ಮ, ಪಕ್ಷಕ್ಕೆ ಮೀಸಲಿರಿಸದೆ ಎಲ್ಲರನ್ನೊಳಗೊಂಡ ಜನಸೇವಾ ಸಮಿತಿ ಇದಾಗಿದ್ದು ಒಳಮೊಗ್ರು ಗ್ರಾಮದ ಜನತೆಯ ನೋವು, ನಲಿವುಗಳಿಗೆ ಸ್ಪಂದಿಸುವ ಕೆಲಸವನ್ನು ಮಾಡಲಿದೆ –ಕುಂಬ್ರ ದುರ್ಗಾಪ್ರಸಾದ್ ರೈ ನ್ಯಾಯವಾದಿ, ಗೌರವಾಧ್ಯಕ್ಷರು