ಕೆಲಸ ಮಾಡಿದ ಬಾಕಿ ಹಣ ನೀಡದೇ ವಂಚನೆ ಆರೋಪ : ಮೃತ್ಯುಂಜಯೇಶ್ವರ ದೇವಸ್ಥಾನದ ಎದುರು ಮುಂದುವರಿದ ಕಾರ್ಮಿಕನ ಉಪವಾಸ ಸತ್ಯಾಗ್ರಹ

0

ಪುತ್ತೂರು: ಮುಂಡೂರು ಮೃತ್ಯಂಜಯೇಶ್ವರ ದೇವಸ್ಥಾನದಲ್ಲಿ ನಡೆದ ಕಾಮಗಾರಿ ಕೆಲಸಗಳ ಬಾಕಿ ಮೊತ್ತ ರೂ.71,250 ನೀಡದೇ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಲೋಕಪ್ಪ ಗೌಡ ಮತ್ತು ಕಾರ್ಯದರ್ಶಿ ಜನಾರ್ದನ ಜೋಯಿಸ ಅವರು ವಂಚಿಸಿದ್ದಾರೆ ಎಂದು ಆರೋಪಿಸಿ ಜನಾರ್ದನ ಎಂಬವರು ದೇವಸ್ಥಾನದಲ್ಲಿ ಮುಂಭಾಗದಲ್ಲಿ ಉಪವಾಸ ಸತ್ಯಾಗ್ರಹ ಮುಂದುವರಿಸಿದ್ದಾರೆ.

ಆ.11ರಂದು ಉಪವಾಸ ಸತ್ಯಾಗ್ರಹ ನಡೆಸಿದ್ದ ಜನಾರ್ದನ ಅವರು ಇದೀಗ ಆ.13ರಂದು ಮತ್ತೆ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ನನಗೆ ಸಿಗಬೇಕಾದ ಕಾಮಗಾರಿಯ ಬಾಕಿ ಮೊತ್ತ ಸಿಕ್ಕಿಲ್ಲ ಎನ್ನುವ ಕಾರಣಕ್ಕೆ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದು ನನಗೆ ದೇವಸ್ಥಾನದ ಅಧ್ಯಕ್ಷರಿಂದಾಗಲೀ, ಕಾರ್ಯದರ್ಶಿಯವರಿಂದಾಗಲೀ ಹಣ ನೀಡುವ ಬಗ್ಗೆ ಯಾವುದೇ ಭರವಸೆ ಸಿಕ್ಕಿರುವುದಿಲ್ಲ. ನನಗೆ ಹಣ ನೀಡಲು ಬಾಕಿ ಇಲ್ಲ ಎಂದು ದೇವಸ್ಥಾನದ ಅಧ್ಯಕ್ಷ ಲೋಕಪ್ಪ ಗೌಡರು ಪತ್ರಿಕೆಗೆ ಹೇಳಿಕೆ ನೀಡಿದ್ದಾರೆ. ನನಗೆ ಹಣ ಕೊಡಲು ಬಾಕಿಯಿಲ್ಲ ಎಂದು ಅವರು ದಾಖಲೆ ಸಹಿತ ಸಾಬೀತುಪಡಿಸಬೇಕು ಇಲ್ಲವೇ ದೇವಸ್ಥಾನದಲ್ಲಿ ಬಂದು ಹೇಳಬೇಕು ಎಂದು ಜನಾರ್ದನ ಅವರು ತಿಳಿಸಿದ್ದಾರೆ. ನನಗೆ ನ್ಯಾಯ ಬೇಕು. ನ್ಯಾಯ ಸಿಗುವವರೆಗೆ ಉಪವಾಸ ಸತ್ಯಾಗ್ರಹ ನಡೆಸಲು ನಿರ್ಧರಿಸಿದ್ದೇನೆ ಎಂದು ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here