ಉಪ್ಪಿನಂಗಡಿಯ ಡಾ. ಸುಪ್ರೀತ್ ಲೋಬೋರವರಿಗೆ ಆಯುರ್ವೇದದಲ್ಲಿ ಪಿಹೆಚ್.ಡಿ. ಪದವಿ

0

ಉಪ್ಪಿನಂಗಡಿ: ಇಲ್ಲಿನ ಡಾ. ಕೆ.ಜಿ. ಭಟ್ ಬಿಲ್ಡಿಂಗ್‌ನಲ್ಲಿ ಜೊಸ್ಸೀಸ್ ಆಯುರ್ವೇದ ಆಸ್ಪತ್ರೆ ಮತ್ತು ನೆಕ್ಕಿಲಾಡಿಯಲ್ಲಿ “ಬಳ್ಳಿ ಆಯುರ್ಗ್ರಾಮ” ಎಂಬ ಆಯುರ್ವೇದ ಆಸ್ಪತ್ರೆ ಹೊಂದಿರುವ ಡಾ. ಸುಪ್ರೀತ್ ಲೋಬೋರವರು ಭುವನೇಶ್ವರದ ಉತ್ಕಲ ಯುನಿವರ್ಸಿಟಿಯಿಂದ ಆಯುರ್ವೇದದಲ್ಲಿ ಪಿಹೆಚ್.ಡಿ. ಪದವಿ ಪಡೆದಿದ್ದಾರೆ.

ಡಾ. ಸುಪ್ರೀತ್ ಲೋಬೋರವರು ಡಾ. ಚತುರ್ಭುಜ ಭುಯಾನ್ M.S (Ay.), Ph.D ರವರ ಮಾರ್ಗದರ್ಶನದಲ್ಲಿ ‘A COMPARATIVE CLINICAL STUDY OF AGNIKARMA WITH SUVARN SHALAKA AND PANCHADHATU SHALAKA IN JANUSANDHIGATA VATA W.S.R. TO OSTEOARTHRITIS OF KNEE JOINT’ ಎಂಬ ಮಹಾಪ್ರಬಂಧ ಮಂಡಿಸಿ, ಮೊಣಗಂಟು ನೋವಿನ ಮೇಲೆ ಸಂಶೋಧನೆಯನ್ನು ನಡೆಸಿ, ಆಯುರ್ವೇದದಲ್ಲಿ ಪಿಹೆಚ್.ಡಿ ಪದವಿಯನ್ನು ಪಡೆದಿರುತ್ತಾರೆ.

2008ರಲ್ಲಿ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಭಾಗಿ: ಡಾ. ಸುಪ್ರೀತ್‌ರವರು ತನ್ನ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಣವನ್ನು ನೆಲ್ಯಾಡಿಯ ಜ್ಞಾನೋದಯ ಬೆಥನಿಯಲ್ಲಿ, ಪದವಿ ಪೂರ್ವ ಶಿಕ್ಷಣವನ್ನು ಪುತ್ತೂರು ಸಂತ ಫಿಲೋಮಿನಾ ಕಾಲೇಜಿನಲ್ಲಿ ಪಡೆದಿದ್ದರು. ಹಾಸನದ ಎಸ್.ಡಿ.ಎಂ. ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯಲ್ಲಿ ಬಿಎಎಂಎಸ್. ಪದವಿಯನ್ನು ಪೂರೈಸಿದ್ದರು. ಎನ್.ಎಸ್.ಎಸ್.ನಲ್ಲಿ ಸಕ್ರೀಯರಾಗಿ ತೊಡಗಿಸಿಕೊಂಡಿದ್ದ ಡಾ. ಸುಪ್ರೀತ್‌ರವರು 2008ರಲ್ಲಿ ದೆಹಲಿಯಲ್ಲಿ ಗಣರಾಜ್ಯೋತ್ಸವ ಪಥ ಸಂಚಲನದಲ್ಲಿ ಕೆಡೆಟ್ ಆಗಿ ಭಾಗವಹಿಸಿದ್ದರು.

ಎಂ.ಎಸ್. (ಆಯು) ಸ್ನಾತಕೋತ್ತರ ಪದವಿಯನ್ನು ವಿಶ್ವದಲ್ಲೇ ಆಯುರ್ವೇದದ ಅಗ್ರಗಣ್ಯ ಸಂಸ್ಥೆಯಾದ ಗುಜರಾತಿನ ಜಾಮ್ ನಗರದಲ್ಲಿರುವ ITRA (Institute of national importance) ನಲ್ಲಿ M.S (Ay.) ಜನರಲ್ ಮೆರಿಟ್‌ನಲ್ಲಿ ಪಡೆದಿರುವ ಇವರು ಪಿಜಿಡಿವೈಎನ್., ಯೋಗ ಮತ್ತು ನ್ಯಾಚುರೋಪತಿಯಲ್ಲಿ ಎರಡು ವರ್ಷದ ಪಿ.ಜಿ. ಡಿಪ್ಲೋಮ ಪದವಿಯನ್ನು ಪಡೆದಿರುತ್ತಾರೆ.

34-ನೆಕ್ಕಿಲಾಡಿ ಗ್ರಾಮದ ಬಳ್ಳಿ ನಿವಾಸಿ ದಿವಂಗತ ಜೊಸ್ಸಿ ಲೋಬೊ ಮತ್ತು ಐರಿನ್ ಲೋಬೊ ದಂಪತಿಯ ಪುತ್ರರಾಗಿರುವ ಡಾ. ಸುಪ್ರೀತ್ ಲೋಬೋರವರು ದಂತ ವೈದ್ಯೆ ಡಾ. ಶೈನಿ ಪಾಯ್ಸ್‌ರನ್ನು ವಿವಾಹವಾಗಿದ್ದು, ಪ್ರಸಕ್ತ ಉಪ್ಪಿನಂಗಡಿ ಡಾ. ಕೆ.ಜಿ. ಭಟ್ ಬಿಲ್ಡಿಂಗ್‌ನಲ್ಲಿ ಜೊಸ್ಸೀಸ್ ಆಯುರ್ವೇದ ಆಸ್ಪತ್ರೆ ಮತ್ತು ನೆಕ್ಕಿಲಾಡಿಯಲ್ಲಿ “ಬಳ್ಳಿ ಆಯುರ್ಗ್ರಾಮ” ಎಂಬ ಆಯುರ್ವೇದ ಆಸ್ಪತ್ರೆ ಹಾಗೂ ವೆಲ್‌ನೆಸ್ ಸೆಂಟರ್ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here