ಪುತ್ತೂರು: ಸರ್ವೆ ಮುಖ್ಯರಸ್ತೆಯಲ್ಲಿ ನೂತನವಾಗಿ ನಿರ್ಮಿಸಿದ ಗೋಪಿಕಾ ಸಂಕೀರ್ಣ ಹಾಗೂ ಗೋಪಿಕಾ ಟ್ರೇಡರ್ಸ್ ಅ. 5 ರಂದು ಶುಭಾರಂಭಗೊಂಡಿತು. ನೀರ ಮೂಲೆ ಗೋಪಾಲಕೃಷ್ಣ ಭಟ್ ಪೂಜಾ ವಿಧಿ ವಿಧಾನ ನೆರವೇರಿಸಿದರು.
ಮಾಲಕರ ಅಣ್ಣ ಗಣಪತಿ ಭಟ್ ಮುಂಡೂರು, ಪತ್ನಿ ಪಾರ್ವತಿ ಸುಮಾ, ಪುತ್ರರಾದ ಶಶಾನ್ ರಾಮ್, ಶಮನ್ ಕೃಷ್ಣ ಗ್ರಾಹಕರನ್ನು ಸ್ವಾಗತಿಸಿ ಸತ್ಕರಿಸಿದರು.
ಗೋಪಿಕಾ ಟ್ರೇಡರ್ಸ್ನಲ್ಲಿ ಗೃಹೋಪಯೋಗಿ ಸಾಮಾಗ್ರಿಗಳಾದ ದಿನಸಿ, ಸ್ಟೀಲ್ ,ಅಲ್ಯೂಮೀನಿಯಂ, ಪ್ಲಾಸ್ಟಿಕ್ ,ಪೂಜಾ ಸಾಮಗ್ರಿಗಳು, ಕೃಷಿ ಉಪಕರಣಗಳು ಹಾಗೂ ಹಾರ್ಡ್ವೇರ್ ,ಸ್ಟೇಷನರಿ ಇತ್ಯಾದಿಗಳು ಲಭ್ಯವಿದೆ ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಸಂಸ್ಥೆಯ ಮಾಲಕರಾದ ಶಿವರಾಮ ಭಟ್ ಸರ್ವೆ ತಿಳಿಸಿದರು. ಬಂಧು ಮಿತ್ರರು ಉಪಸ್ಥಿತರಿದ್ದರು.