ಡಾ.ರವೀಶ್ ಪಡುಮಲೆ ಹಾಗು ಡಾ. ವಿಶುಕುಮಾರ್‌ ರವರಿಗೆ ಹುಟ್ಟೂರ ಸನ್ಮಾನ

0

ಪಡುಮಲೆ: ಕೋಟಿ ಚೆನ್ನಯ ಯುವಕ ಮಂಡಲ‌ ಪಡುಮಲೆ, ಪುತ್ತೂರು ಇದರ ಆಶ್ರಯದಲ್ಲಿ ನಡೆದ ವಾಲಿಬಾಲ್ ಮತ್ತು ಹಗ್ಗ ಜಗ್ಗಾಟ ಪಂದ್ಯಾವಳಿ ಸಂದರ್ಭದಲ್ಲಿ ದ್ಯೆವ ನರ್ತಕ ಇಂಜಿನಿಯರ್ ಡಾ.ರವೀಶ್ ಪಡುಮಲೆ ಹಾಗು ಉಡುಪಿ ಆದರ್ಶ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ವಿಶುಕುಮಾರ್‌ ರವರಿಗೆ ಸನ್ಮಾನ ಮಾಡಿ ಹುಟ್ಟೂರ ಗೌರವವನ್ನು ಸಲ್ಲಿಸಲಾಯಿತು. 

ಮಾಜಿ ಶಾಸಕಿ ಶಕುಂತಲಾ ಶೆಟ್ಟಿ, ಬಾಲಕೃಷ್ಣ ರೈ ಕುದ್ಕಾಡಿ, ಮಹಮ್ಮದ್ ಬಡಗನ್ನೂರು,  ದಿವ್ಯಪ್ರಭಾ ಗೌಡ ಚೆಲ್ತಡ್ಕ , ಕೋಟಿ ಚೆನ್ನಯ ಯುವಕ ಮಂಡಲ‌ದ ಅದ್ಯಕ್ಷರು ಮತ್ತು ಸರ್ವ ಸದಸ್ಯರು ಭಾಗವಹಿಸಿ ಡಾ.ರವೀಶ್ ಮತ್ತು ಡಾ.ವಿಶುಕುಮಾರ್ ಪಡುಮಲೆ ಯವರನ್ನು ಗೌರವಿಸಿದರು.  

LEAVE A REPLY

Please enter your comment!
Please enter your name here