ಬಲ್ನಾಡು : ಪೂರ್ವಿಕ ಒಕ್ಕಲಿಗ ಸ್ವಸಹಾಯ ಸಂಘ ರಚನೆ

0

ಪುತ್ತೂರು: ಬಲ್ನಾಡು ಗ್ರಾಮದಲ್ಲಿ ಸೇಸಮ್ಮ ಬಾಬುಗೌಡರವರು ಪೂರ್ವಿಕ ಒಕ್ಕಲಿಗ ಸ್ವಸಹಾಯ ಸಂಘವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.

ಬಲ್ನಾಡು ಗ್ರಾಮದ ಒಕ್ಕಲಿಗ ಒಕ್ಕೂಟದ ಉಪಾಧ್ಯಕ್ಷ ಯಕ್ಷತಾ ಕಟ್ಟೆಮನೆ ಮಾದ್ಯಾರು ಸಭಾನಡವಳಿ ಹಸ್ತಾಂತರ ಮಾಡಿದರು. ಸಂಘದ ಅಧ್ಯಕ್ಷರಾಗಿ ಲೋಕೇಶ್ ಗೌಡ ಮುದಲಾಜೆ, ಕಾರ್ಯದರ್ಶಿಯಾಗಿ ಆನಂದ ಗೌಡ ಮಂಜಲ್ತಡ್ಕ, ಸದಸ್ಯರುಗಳಾಗಿ ಮೋಹಿನಿಕುಶಾಲಪ್ಪ ಗೌಡ, ಭವ್ಯಶ್ರೀ, ಪುಷ್ಪಲತಾ, ಲಲಿತ, ಪ್ರೇಮ, ಹೃತಿಕ್, ತ್ರಿವೇಣಿ, ರಮ್ಯಾ ಸೇರ್ಪಡೆಯಾದರು. ಟ್ರಸ್ಟ್ ವಲಯ ಮೇಲ್ವಿಚಾರಕಿ ಸುಮಲತಾ ಸಂಘದ ನಿಯಮಗಳನ್ನು ತಿಳಿಸಿ ಶುಭಹಾರೈಸಿದರು. ಪುತ್ತೂರು ವಲಯ ಪ್ರೇರಕಿ ನಮಿತಾ ಗೌಡ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here