ಕೆದಂಬಾಡಿ ಗ್ರಾಪಂನಲ್ಲಿ ಕೋಟಿ ಕಂಠ ಗಾಯನ ಕಾರ್ಯಕ್ರಮ

0

ಪುತ್ತೂರು: 67 ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕರ್ನಾಟಕ ಸರ್ಕಾರ ಇದರ ಆದೇಶದಂತೆ ಕೆದಂಬಾಡಿ ಗ್ರಾಮ ಪಂಚಾಯತ್ ನಲ್ಲಿ ಕೋಟಿ ಕಂಠ ಗಾಯನ ಕಾರ್ಯಕ್ರಮ ನಡೆಯಿತು.

ಗ್ರಾಮ ಪಂಚಾಯತ್ ಅಧ್ಯಕ್ಷ ರತನ್ ರೈ ಕುಂಬ್ರ, ಸದಸ್ಯರುಗಳಾದ ವಿಠಲ ರೈ ಎಂ ,ಪ್ರವೀಣ್ ಶೆಟ್ಟಿ ಎಂ, ಸುಜಾತ ಯನ್, ರೇವತಿ, ಜಯಲಕ್ಷ್ಮಿ ಬಲ್ಲಾಳ್, ಗ್ರಾಮ ಸಹಾಯಕ ಶ್ರೀಧರ್, ಆಸರೆ ಸಂಜೀವಿನಿ ಒಕ್ಕೂಟದ ಲೀಲಾ,ಪೂರ್ಣಿಮಾ ಇದ್ಪಾಡಿ, ಪೂರ್ಣಿಮಾ ರೈ, ಜಯಲತಾ ,ಅಂಗನವಾಡಿ ಕಾರ್ಯಕರ್ತೆಯರಾದ ತಾರಾ ಬಲ್ಲಾಳ್,ಕಮಲಾಕ್ಷಿ ಹಾಗೂ ಆಶಾ ಕಾರ್ಯಕರ್ತೆಯರಾದ ರೇಖಾ ರೈ, ಸುಂದರಿ ಪಿ.ಕೆ ಹಾಗೂ ಚಂದ್ರ ಕುಂಬ್ರ ಗ್ರಾಮ ಪಂಚಾಯತ್ ಸಿಬ್ಬಂದಿಗಳಾದ ಜಯಂತ್ ಮೇರ್ಲ, ಮೃದುಳಾ, ಗಣೇಶ್, ಶಶಿಪ್ರಭಾ ರೈ, ವಿದ್ಯಾಪ್ರಸಾದ್ ಭಾಗವಹಿಸಿದ್ದರು .ಗ್ರಾಮ ಪಂಚಾಯತಿ ಕಾರ್ಯದರ್ಶಿ ಸುನಂದ ಬಿ ರೈ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here