ಮುಂಡೂರು ಉದಯಗಿರಿ ವಿಷ್ಣುಮೂರ್ತಿ ದೈವಸ್ಥಾನದಲ್ಲಿ ಮುಳ್ಳು ಗುಳಿಗ ದೈವದ ಕಟ್ಟೆಗೆ ಶಿಲಾನ್ಯಾಸ

0

ಪುತ್ತೂರು;ಮುಂಡೂರು ಉದಯಗಿರಿ ವಿಷ್ಣುಮೂರ್ತಿ ದೈವಸ್ಥಾನದಲ್ಲಿ ಜೀರ್ಣೋದ್ದಾರದ ಕಾಮಗಾರಿಗಳು ಭರದಿಂದ ಸಾಗುತ್ತಿದ್ದು ಅ.30 ರಂದು ಮುಳ್ಳು ಗುಳಿಗ ದೈವದ ಕಟ್ಟೆಗೆ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿತು.

ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಅರುಣ್ ಕುಮಾರ್ ಪುತ್ತಿಲ, ದೈವಸ್ಥಾನದ ಮರದ ಕೆತ್ತನೆ ಶಿಲ್ಪಿಗಳಾದ ಶೇಷಪ್ಪ ಆಚಾರಿ ಮುಂಡೂರು, ಕಲ್ಲಿನ ಮೇಸ್ತ್ರಿಗಳಾದ ಮೋಹನ್ ನಾಯ್ಕರವರ ಶಿಲಾನ್ಯಾಸ ನೆರವೇರಿಸಿದರು.

ಜೀರ್ಣೋದ್ದಾರ ಸಮಿತಿಯ ಕೋಶಾಧಿಕಾರಿ ಅನಿಲ್ ಕುಮಾರ್ ಕಣ್ಣಾರ್ನೂಜಿ, ಒತ್ತೆಕೋಲ ಸಮಿತಿಯ ಕಾರ್ಯದರ್ಶಿ ಸದಾಶಿವ ಶೆಟ್ಟಿ ಪಟ್ಟೆ, ಜತೆ ಕಾರ್ಯದರ್ಶಿ ಈಶ್ವರ ನಾಯ್ಕ ಅಜಾಲಾಡಿ, ಕೋಶಾಧಿಕಾರಿ ಪಿ. ಹುಕ್ರ ಮಾಸ್ಟರ್, ಶಿಲ್ಪಿಗಳು, ವಿನೋದ್ ಶೆಟ್ಟಿ ಪಂಜಳ,ಚಂದ್ರಹಾಸ ಕೊರಂಗು, ರಮೇಶ್ ಅಂಚನ್, ಪ್ರವೀಣ್ ಮುಲಾರ್ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here