ಶಿರಾಡಿ: ಕಾಡಾನೆ ಉಪಟಳ- ವಿದ್ಯುತ್ ತಂತಿಗೆ ಹಾನಿ

0

ನೆಲ್ಯಾಡಿ: ಕಾಡಾನೆ ಉಪಟಳದಿಂದ ಮರಬಿದ್ದು ವಿದ್ಯುತ್ ತಂತಿ ಹಾನಿಗೊಳಗಾದ ಘಟನೆ ಕಡಬ ತಾಲೂಕಿನ ಶಿರಾಡಿ ಗ್ರಾಮದ ಬಾಗಿಲುಗದ್ದೆ ಎಂಬಲ್ಲಿ ನ.24ರಂದು ನಡೆದಿದೆ.

ಆಹಾರ ಅರಸಿ ಬಂದ ಕಾಡಾನೆಯೊಂದು ಬಾಗಿಲುಗದ್ದೆಯಲ್ಲಿ ಹೆದ್ದಾರಿ ಬದಿಯ ಬೈನೆ ಮರವೊಂದನ್ನೂ ದೂಡಿ ಹಾಕಿದ್ದು ಮರವು ವಿದ್ಯುತ್ ಎಚ್.ಟಿ.ಲೈನ್‌ಗೆ ಮೇಲೆಯೇ ಬಿದ್ದಿದೆ. ಮರ ಬಿದ್ದ ತಕ್ಷಣ ವಿದ್ಯುತ್ ಕಡಿತಗೊಂಡಿರುವುದರಿಂದ ದೊಡ್ಡ ಪ್ರಮಾಣದ ಅಪಘಾತ ತಪ್ಪಿದೆ. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಪವರ್‌ಮ್ಯಾನ್ ದಿನೇಶ್‌ರವರು ವಿದ್ಯುತ್ ತಂತಿ ಸರಿಪಡಿಸಲು ಮುಂದಾಗುತ್ತಿದ್ದಂತೆ ಆನೆ ಘರ್ಜಿಸಿದ್ದು ಅವರು ಹೆದರಿ ಅಲ್ಲಿಂದ ತೆರಳಿದರು. ಬಳಿಕ ನ.25ರಂದು ಬೆಳಿಗ್ಗೆ ಮೆಸ್ಕಾಂ ನೆಲ್ಯಾಡಿ ಶಾಖಾ ಜೂನಿಯರ್ ಇಂಜಿನಿಯರ್ ರಮೇಶ್‌ರವರು ಪವರ್‌ಮ್ಯಾನ್‌ಗಳೊಂದಿಗೆ ಘಟನಾ ಸ್ಥಳಕ್ಕೆ ತೆರಳಿ ಸಾರ್ವಜನಿಕರ ಸಹಕಾರದೊಂದಿಗೆ ವಿದ್ಯುತ್ ತಂತಿ ದುರಸ್ತಿಗೊಳಿಸಿದ್ದಾರೆ.

LEAVE A REPLY

Please enter your comment!
Please enter your name here