ರಾಮಕುಂಜ ಕ.ಮಾ.ಪ್ರೌಢಶಾಲೆಯಲ್ಲಿ ವಿ.ಎಸ್.ಎಸ್ ಶಿಬಿರ

0

ರಾಮಕುಂಜ: ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ವಿಶ್ವೇಶ ಸೇವಾ ಸಂಘದ ವತಿಯಿಂದ ನಾಟಕ ತರಬೇತಿ ಶಿಬಿರ ನಡೆಯಿತು.


ನಿರ್ದೇಶಕ ಕೃಷ್ಣಪ್ಪ ಬಂಬಿಲರವರು ಉದ್ಘಾಟಿಸಿ ಮಾತನಾಡಿ, ರಂಗಭೂಮಿಯ ಬಗೆಗಿನ ಅರಿವನ್ನು ಮೂಡಿಸುವ ಮೂಲಕ ಜಾನಪದ ಕಲೆಗೆ ಹೆಚ್ಚು ಪ್ರೋತ್ಸಾಹ ನೀಡಬೇಕೆಂದು ತಿಳಿಸಿದರು. ಶಾಲೆಯ ಗಣಿತಶಾಸ್ತ್ರ ಶಿಕ್ಷಕ ವೆಂಕಟೇಶ ದಾಮ್ಲೆಯವರು ಅಧ್ಯಕ್ಷತೆ ವಹಿಸಿದ್ದರು. ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ ಕೆ., ಶಾಲೆಯ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಮಾಧವ ಭಟ್‌ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾಲೆಯ ಕನ್ನಡ ಶಿಕ್ಷಕ ರುದ್ರ ನಾಯಕ್ ಟಿ., ಸ್ವಾಗತಿಸಿ, ಕನ್ನಡ ಶಿಕ್ಷಕಿ ಸುಪ್ರಿತಾ ಕೆ., ವಂದಿಸಿದರು. ಕನ್ನಡ ಶಿಕ್ಷಕ ರುದ್ರ ನಾಯಕ್ ಟಿ., ನಿರೂಪಿಸಿದರು.

LEAVE A REPLY

Please enter your comment!
Please enter your name here