ನೆಲ್ಯಾಡಿ ಜ್ಞಾನೋದಯ ಬೆಥನಿ ಪ.ಪೂ.ಕಾಲೇಜಿನ ವಾರ್ಷಿಕ ಕ್ರೀಡಾಕೂಟ

0

ನೆಲ್ಯಾಡಿ: ಇಲ್ಲಿನ ಜ್ಞಾನೋದಯ ಬೆಥನಿ ಪ.ಪೂ.ಕಾಲೇಜಿನ 35ನೇ ವಾರ್ಷಿಕ ಕ್ರೀಡಾಕೂಟ ಡಿ.1 ಮತ್ತು 2ರಂದು ನಡೆಯಿತು.

ಮುಖ್ಯ ಅತಿಥಿಯಾಗಿದ್ದ ಕರ್ನಾಟಕ ರಾಜ್ಯ ವಾಲಿಬಾಲ್ ಅಸೋಸಿಯೇಶನ್‌ನ ಅಡಕ್ ಕಮಿಟಿಯ ಚೇರ್‌ಮೆನ್ ಹಾಗೂ ಕನ್‌ವೀನಿಯರ್ ಆದ ಎಲ್.ಪಿ.ಆಂಟನಿಯವರು ಮಾತನಾಡಿ, ವಿದ್ಯಾರ್ಥಿಗಳು ಕ್ರೀಡಾಚಟುವಟಿಕೆಯಲ್ಲಿ ಸಕ್ರಿಯವಾಗಿರಬೇಕೆಂದು ಹೇಳಿದರು. ಸಂಸ್ಥೆಯ ಪ್ರಾಂಶುಪಾಲ ರೆ.ಫಾ.ತೋಮಸ್ ಬಿಜಿಲಿಯವರು ಅಧ್ಯಕ್ಷತೆ ವಹಿಸಿದ್ದರು. ಸಂಚಾಲಕ ರೆ.ಫಾ.ಮೆಲ್ವಿನ್ ಮ್ಯಾಥ್ಯು ಒಐಸಿಯವರು ಶುಭಹಾರೈಸಿದರು. ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಕೆ.ಪಿ.ಅಬ್ರಹಾಂರವರು ಕ್ರೀಡೆಯು ಮಕ್ಕಳ ಬಾಳನ್ನು ಬೆಳಗಲಿ ಎಂದು ಶುಭಹಾರೈಸಿದರು. ಕ್ರೀಡಾಕೂಟವು ಆಕರ್ಷಕ ಪಥಸಂಚಲನದೊಂದಿಗೆ ಆರಂಭಗೊಂಡಿತು. ಕ್ರೀಡಾನಾಯಕ ಪ್ರಜ್ವಲ್ ಸ್ವಾಗತಿಸಿದರು. ಆಯಿಶಾ ಫರ್ಜಾ ನಿರೂಪಿಸಿದರು. ರಾಯಿಲ ವಂದಿಸಿದರು.

LEAVE A REPLY

Please enter your comment!
Please enter your name here