ಗೋಳಿತ್ತೊಟ್ಟು: ಮನೆಯಿಂದ ನಗದು ಕಳವು

0

ನೆಲ್ಯಾಡಿ: ಕಡಬ ತಾಲೂಕಿನ ಗೋಳಿತ್ತೊಟ್ಟು ನಿವಾಸಿ ಅಬ್ದುಲ್ ರಹಿಮಾನ್‌ರವರ ಪುತ್ರ ಮಾಯಿಲ್‌ಕುಂಞಿ ಎಂಬವರ ಮನೆಯಿಂದ ನಗದು ಕಳವುಗೈದ ಘಟನೆ ಡಿ.7ರಂದು ರಾತ್ರಿ ನಡೆದಿದೆ.

ಮಾಯಿಲ್‌ಕುಂಞಿ ಹಾಗೂ ಅವರ ಪತ್ನಿ, ಮಕ್ಕಳು ಮನೆಗೆ ಬೀಗ ಹಾಕಿ ಕಲ್ಲಡ್ಕಕ್ಕೆ ಸಂಬಂಧಿಕರ ಮದುವೆಗೆ ಹೋಗಿದ್ದರು. ಮಾಯಿಲ್‌ಕುಂಞಿಯವರ ತಾಯಿ ಪಕ್ಕದಲ್ಲೇ ಇರುವ ಇನ್ನೋರ್ವ ಮಗನ ಮನೆಗೆ ಹೋಗಿದ್ದರು. ರಾತ್ರಿ ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ತಿಳಿದುಕೊಂಡ ಕಳ್ಳರು ಮನೆಯ ಮುಂಭಾಗದ ಬಾಗಿಲಿನ ಬೀಗ ಮುರಿದು ಮನೆಯೊಳಗೆ ಪ್ರವೇಶಿಸಿ ಮೂರು ಕಪಾಟುಗಳಲ್ಲಿ ಒಡವೆ, ಹಣಕ್ಕಾಗಿ ತಡಕಾಡಿದ್ದಾರೆ. 1 ಕಪಾಟಿನಲ್ಲಿದ್ದ ಅಂದಾಜು 2 ಸಾವಿರ ರೂ.,ದೋಚಿದ್ದಾರೆ. ಬೆಳಿಗ್ಗೆ ಪಕ್ಕದ ಹೋಟೆಲ್‌ನ ಯುವಕ ಮಾಯಿಲ್‌ಕುಂಞಿಯವರ ಮನೆಯ ಬಾಗಿಲು ತೆಗೆದಿರುವುದನ್ನು ಗಮನಿಸಿ ಪರಿಶೀಲಿಸಿದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಸ್ಥಳಕ್ಕೆ ಉಪ್ಪಿನಂಗಡಿ ಎಸ್‌ಐ, ನೆಲ್ಯಾಡಿ ಹೊರಠಾಣೆ ಪೊಲೀಸರು ಭೇಟಿ ನೀಡಿ ಮಾಹಿತಿ ಪಡೆದುಕೊಂಡು ಪ್ರಕರಣ ದಾಖಲಿಸಿದ್ದಾರೆ. ಸ್ಥಳಕ್ಕೆ ಬೆರಳಚ್ಚು ತಜ್ಞರು, ಶ್ವಾನದಳದವರು ಆಗಮಿಸಿ ಮಾಹಿತಿ ಸಂಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here