ಕಟ್ಟತ್ತಾರು ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷರಾಗಿ ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕ;ಪ್ರಧಾನ ಕಾರ್ಯದರ್ಶಿಯಾಗಿ ಸಿ.ಬಿ ಅಬೂಬಕ್ಕರ್ ಪುನರಾಯ್ಕೆ

0

ಪುತ್ತೂರು: ಕಟ್ಟತ್ತಾರು ಬದ್ರಿಯಾ ಜುಮಾ ಮಸೀದಿಯ ಅಧ್ಯಕ್ಷರಾಗಿ ಪಿ.ಎಂ ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಸಿ.ಬಿ ಅಬೂಬಕ್ಕರ್ ಪುನರಾಯ್ಕೆಗೊಂಡಿದ್ದಾರೆ. ಉಪಾಧ್ಯಕ್ಷರಾಗಿ ಹಾಜಿ ಉಮ್ಮರ್ ಮುಸ್ಲಿಯಾರ್ ನಂಜೆ, ಕೋಶಾಧಿಕಾರಿಯಾಗಿ ಕೆ.ಎಂ ಯೂಸುಫ್, ಜೊತೆ ಕಾರ್ಯದರ್ಶಿಯಾಗಿ ಕೆ.ಎಂ ಶರೀಫ್ ಕಟ್ಟತ್ತಾರು ಪುನರಾಯ್ಕೆಯಾಗಿದ್ದಾರೆ. ಸಮಿತಿ ಸದಸ್ಯರುಗಳಾಗಿ ಯೂಸುಫ್ ಹಾಜಿ ಅಂಗಡಿ, ಎನ್.ಎಂ ಮಹಮ್ಮದ್, ಮುಸ್ತಫಾ ಯು.ಕೆ, ಎ.ಪಿ ಬಶೀರ್, ಬಿ.ಎಂ ಉಮ್ಮರ್ ಹಾಜಿ, ಅಬೂಬಕ್ಕರ್ ನಿಡ್ಯಾಣ, ಕೆ.ಎಂ ಅಶ್ರಫ್ ಕಟ್ಟತ್ತಾರು ಪುನರಾಯ್ಕೆಗೊಂಡಿದ್ದಾರೆ. ಕಟ್ಟತ್ತಾರು ಮಸೀದಿಯಲ್ಲಿ ನಡೆದ ಜಮಾಅತ್ ಕಮಿಟಿಯ ಮಹಾಸಭೆಯಲ್ಲಿ ಹಾಲಿ ಸಮಿತಿಯನ್ನೇ ಮುಂದುವರಿಸಲಾಯಿತು. ಜಮಾಅತ್ ಜೊತೆ ಕಾರ್ಯದರ್ಶಿ ಕೆ.ಎಂ ಶರೀಫ್ ಕಟ್ಟತ್ತಾರು ವಾರ್ಷಿಕ ವರದಿ ಮಂಡಿಸಿದರು.


ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕ ಅವರು ಕಳೆದ 40 ವರ್ಷಗಳಿಂದ ಕಟ್ಟತ್ತಾರು ಬದ್ರಿಯಾ ಜುಮಾ ಮಸೀದಿಯಲ್ಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ರಾತೀಬು ನೇರ್ಚೆ:
ಮಹಾ ಸಭೆಯ ಮೊದಲು ಮಸೀದಿಯ ಖತೀಬರಾದ ಇಸಾಕ್ ಬಾಹಸನಿ ಆತೂರು ನೇತೃತ್ವದಲ್ಲಿ ವರ್ಷಂಪ್ರತಿ ನಡೆಯುವ ರಾತೀಬ್ ನೇರ್ಚೆ ನಡೆಯಿತು. ಇಸ್ಮಾಯಿಲ್ ತಂಙಳ್ ಮಾಡಾವು ದುವಾ ನೆರವೇರಿಸಿದರು. ಸದರ್ ಉಸ್ತಾದ್ ಸಿದ್ದೀಕ್ ಫೈಝಿ, ಮುಅಝ್ಝಿನ್ ಮುಹಿಯುದ್ದೀನ್ ಮುಸ್ಲಿಯಾರ್ ಹಾಗೂ ಮುಅಲ್ಲಿಂ ಉಮರ್ ಅಝ್‌ಹರಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here