ಬೆಳ್ಳಿಪ್ಪಾಡಿ:ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಹಲ್ಲೆ ಆರೋಪ; ಕಾಂಗ್ರೆಸ್ ಎಸ್ಸಿ ಘಟಕದ ನಗರ ಕಾರ್ಯದರ್ಶಿ ಆಸ್ಪತ್ರೆಗೆ ದಾಖಲು

0

ಪುತ್ತೂರು:ಬೆಳ್ಳಿಪ್ಪಾಡಿಯ ಜಮೀನೊಂದರಲ್ಲಿ ಕೆಲಸ ಮಾಡುತ್ತಿದ್ದ ವೇಳೆ ತಂಡವೊಂದು ಬಂದು ಹಲ್ಲೆ ನಡೆಸಿರುವುದಾಗಿ ಹೇಳಿಕೊಂಡು ಕಾಂಗ್ರೆಸ್ ಎಸ್ಸಿ ಘಟಕದ ನಗರ ಕಾರ್ಯದರ್ಶಿ ಜಯಂತ್ ಎಂಬವರು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

‘ನಾನು ಮತ್ತು ಇತರ 8 ಮಂದಿ ಬೆಳ್ಳಿಪ್ಪಾಡಿ ಕನ್ನಡ್ಕದ ಶೇಖರನಗರ ಜಮೀನಿನಲ್ಲಿ ಶ್ವೇತಾ ಎಂಬವರ ಸೂಚನೆಯಂತೆ ಕೆಲಸ ಮಾಡುತ್ತಿದ್ದ ವೇಳೆ ಸಂಜೀವ ಗೌಡ ಮತ್ತು ಸುಮಾರು 10 ಮಂದಿ ಬಂದು ಏಕಾಏಕಿ ನನಗೆ ಹಲ್ಲೆ ನಡೆಸಿದ್ದಾರೆ’ ಎಂದು ಅವರು ಆರೋಪಿಸಿದ್ದಾರೆ. ಪುತ್ತೂರು ನಗರ ಕಾಂಗ್ರೆಸ್ ಮುಖಂಡರು ಆಸ್ಪತ್ರೆಗೆ ಭೇಟಿ ನೀಡಿ ಜಯಂತ್ ಅವರ ಆರೋಗ್ಯ ವಿಚಾರಿಸಿದ್ದಾರೆ.

LEAVE A REPLY

Please enter your comment!
Please enter your name here