ಪೊಲೀಸ್ ಆಗುವ ಕನಸು ಹೊತ್ತ ಮೃತ ಅನುಶ್ರೀ ಮನೆಗೆ ಡಿವೈಎಸ್ಪಿ ಡಾ| ವೀರಯ್ಯ ಹಿರೇಮಠ್ ಭೇಟಿ

0

ಪುತ್ತೂರು: ಪೊಲೀಸ್ ಆಗುವ ಕನಸು ಹೊತ್ತಿದ್ದ ಮೃತ ಅನುಶ್ರೀ ಅವರ ಕಾವು ಮನೆಗೆ ಪುತ್ತೂರು ಡಿವೈಎಸ್ಪಿ ಡಾ| ವೀರಯ್ಯ ಹಿರೇಮಠ್ ಭೇಟಿ ಮಾಡಿ ಮನೆಮಂದಿಗೆ ಸಾಂತ್ವಾನ ಹೇಳಿದರು.


ಕೊಂಬೆಟ್ಟು ಸರಕಾರಿ ಪ್ರೌಢಶಾಲೆಯ ಅನುಶ್ರೀ ಅವರು ಶಾಲೆಯಲ್ಲಿ ಪೊಲೀಸ್ ಕೆಡೆಟ್ ತರಬೇತಿ ಪಡೆಯುತ್ತಿದ್ದು, ಮುಂದೆ ತಾನುಪೊಲೀಸ್ ಆಗುವ ಕನಸು ಹೊತ್ತಿದ್ದರು. ಆದರೆ ಅವರು ಅನಾರೋಗ್ಯದಿಂದ ಮೃತಪಟ್ಟ ಹಿನ್ನೆಲೆಯಲ್ಲಿ ಅವರ ಪೊಲೀಸ್ ಆಗುವ ಕನಸು ಕನಸಾಗಿ ಉಳಿದು ಹೋಯಿತು. ಈ ಕುರಿತು ಮಾಹಿತಿ ಅರಿತ ಪುತ್ತೂರು ಡಿವೈಎಸ್ಪಿ ಡಾ| ವೀರಯ್ಯ ಹಿರೇಮಠ್ ಅವರು ಮೃತ ಅನುಶ್ರೀ ಮನೆಗೆ ಹೋಗಿ ಅವರ ಮನೆಮಂದಿಗೆ ಸಾಂತ್ವಾನ ಹೇಳಿದ್ದಾರೆ. ಈ ಸಂದರ್ಭದಲ್ಲಿ ಪುತ್ತೂರು ಕೊಂಬೆಟ್ಟು ಸರಕಾರಿ ಪ್ರೌಢಶಾಲೆಯ ಶಾಲಾಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್ ಜೊತೆಗಿದ್ದರು.

LEAVE A REPLY

Please enter your comment!
Please enter your name here