ಪುತ್ತೂರು ಶ್ರೀನಿಧಿ ಸೇವಾ ಟ್ರಸ್ಟ್‌ನಿಂದ ಅಶಕ್ತರಿಗೆ ಧನಸಹಾಯದ ಚೆಕ್, ಆಹಾರ ಸಾಮಾಗ್ರಿ ವಿತರಣೆ

0

ಪುತ್ತೂರು: ಪುತ್ತೂರು ಶ್ರೀನಿಧಿ ಸೇವಾ ಟ್ರಸ್ಟ್ ವತಿಯಿಂದ ಹೃದಯರೋಗ, ಕ್ಯಾನ್ಸರ್, ಕಿಡ್ನಿ ವೈಫಲ್ಯದಿಂದ ನೊಂದವರಿಗೆ ಧನಸಹಾಯದ ಚೆಕ್ ಮತ್ತು ಆಹಾರ ಸಾಮಾಗ್ರಿ ವಿತರಣೆ ಕಾರ್ಯಕ್ರಮ ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಾಲಯದ ನಟರಾಜ ವೇದಿಕೆಯಲ್ಲಿ ನಡೆಯಿತು.

ವಕೀಲೆ ಅಕ್ಷತಾ ಉದ್ಘಾಟಿಸಿ ಮಾತನಾಡಿ, ಸಮಾಜದಲ್ಲಿರುವ ದಾನಿಗಳು ವೀರಯೋಧರಿಗೆ ಸಮಾನ. ನೊಂದವರು ಯಾವತ್ತೂ ತಮ್ಮ ಜೀವನದ ಆತ್ಮವಿಶ್ವಾಸ ಕಳೆದುಕೊಳ್ಳಬಾರದು ಆತ್ಮಸ್ಥೈರ್ಯ ಹೆಚ್ಚಿಸಿಕೊಂಡಲ್ಲಿ ಯಶಸ್ಸು ಪಡೆಯಲು ಸಾಧ್ಯ ಎಂದು ಹೇಳಿ ಶುಭಹಾರೈಸಿದರು. ವಕೀಲೆ ಹರಿಣಾಕ್ಷಿ ಜೆ. ಶೆಟ್ಟಿ ಮಾತನಾಡಿ ಮನುಜ ಧರ್ಮ ಶ್ರೇಷ್ಟವಾದ ಧರ್ಮ. ಪ್ರತಿಯೊಬ್ಬರೂ ಈ ಜಗತ್ತಿನಲ್ಲಿ ಸುಂದರವಾಗಿ ಬದುಕಬೇಕು ಎಂದು ಹೇಳಿದರು. ವಕೀಲೆ ರಾಜೇಶ್ವರಿ ಹಾಗೂ ಉಷಾ ಪೂರ್ಣ ಸಂದರ್ಭೋಚಿತವಾಗಿ ಮಾತನಾಡಿದರು.

ಇಂದಿರಾ ಪ್ರಾರ್ಥಿಸಿ ಲಕ್ಷ್ಮಣ ವಿಟ್ಲ ಸ್ವಾಗತಿಸಿದರು. ಸೌಮ್ಯ ವಂದಿಸಿದರು. ಎಸ್‌ಡಿಎಮ್ ಕಾಲೇಜಿನ ವಿದ್ಯಾರ್ಥಿನಿ ಕವಿತಾ ಕಾರ್ಯಕ್ರಮ ನಿರೂಪಿಸಿದರು. ಶ್ರೀನಿಧಿ ಸೇವಾ ಟ್ರಸ್ಟ್ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here