ಜ.24, 25, 26: ಬೊಳುವಾರು ಕ್ಷೇತ್ರದಲ್ಲಿ ವಾರ್ಷಿಕೋತ್ಸವ, ನೇಮೋತ್ಸವ, ಆಮಂತ್ರಣ ಪತ್ರ ಬಿಡುಗಡೆ

0

ಪುತ್ತೂರು: ಬೊಳುವಾರು ಶ್ರೀ ದುರ್ಗಾಪರಮೇಶ್ವರೀ ಉಳ್ಳಾಳ್ತಿ ಮಲರಾಯ ಸಪರಿವಾರ ಕ್ಷೇತ್ರದಲ್ಲಿ 2023ರ ಜ.24ರಂದು ಪ್ರತಿಷ್ಠಾ ವಾರ್ಷಿಕೋತ್ಸವ, ಚಂಡಿಕಾಯಾಗ, ಜ.25, 26ರಂದು ದೈವಗಳಿಗೆ ನೇಮೋತ್ಸವ ನಡೆಯಲಿದ್ದು, ಆಮಂತ್ರಣ ಪತ್ರ ಬಿಡುಗಡೆ ಡಿ.16ರಂದು ಸಂಜೆ ಕ್ಷೇತ್ರದಲ್ಲಿ ನಡೆಯಿತು.


ಕ್ಷೇತ್ರದ ಅರ್ಚಕ ಕೃಷ್ಣಕುಮಾರ್, ನಾರಾಯಣ್ ಭಟ್, ಬಾಲಸುಬ್ರಹ್ಮಣ್ಯ ಭಟ್, ಕ್ಷೇತ್ರ ವಿಶ್ವಸ್ಥ ಮಂಡಳಿ ಅಧ್ಯಕ್ಷ ಪ್ರವೀಣ್ ನಾಯಕ್, ಕೋಶಾಧಿಕಾರಿ ಪ್ರಸನ್ನ ಕುಮಾರ್ ಬಳ್ಳಾಲ್, ಟ್ರಸ್ಟಿಗಳಾದ ವಿ.ಕೆ. ಶೆಟ್ಟಿ, ಮನೋಹರ್ ರೈ, ಧನಂಜಯ ರೈ, ಬೇಬಿ ಪೂಜಾರಿ ಬೊಳುವಾರು, ಸುಂದರ ನಾಯ್ಕ್, ಶಶಿಧರ್ ರಾವ್, ಜಲಜಾಕ್ಷಿ ನಾಗರಾಜ್ ಹೆಗ್ಡೆ ಸ್ಥಳೀಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

 

 

LEAVE A REPLY

Please enter your comment!
Please enter your name here