ಎ.8ರಂದು ನಿವೃತ್ತ ತಹಶೀಲ್ದಾರ್, ಗಾಂಧೀವಾದಿ ಸಿ.ಹೆಚ್.ಕೋಚಣ್ಣ ರೈ ಅವರ ‘ನಾಡಿಗೆ ನಮಸ್ಕಾರ’ ವಿಸ್ತೃತ ಪುಸ್ತಕ ಬಿಡುಗಡೆ – ಉಚಿತ ವಿತರಣೆ

0

ಪುತ್ತೂರು: ನಿವೃತ್ತ ತಹಶೀಲ್ದಾರ್  ಗಾಂಧೀವಾದಿ ಸಿ.ಹೆಚ್.ಕೋಚಣ್ಣ ರೈ ಅವರ ಕುರಿತು ಕೌಟುಂಬಿಕ ಸಹಕಾರದಿಂದ ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದ ವತಿಯಿಂದ ‘ನಾಡಿಗೆ ನಮಸ್ಕಾರ’ ವಿಸ್ತೃತ ಪುಸ್ತಕ ಬಿಡುಗಡೆಯು ಎ.8ರಂದು ದರ್ಬೆ ಬೈಪಾಸ್ ವೃತ್ತದ ಬಳಿಯ ದುಗ್ಗಮ್ಮ ದೇರಣ್ಣ ಶೆಟ್ಟಿ ಸಭಾಭವನದಲ್ಲಿ ನಡೆಯಲಿದೆ.

ಕೋಚಣ್ಣ ರೈ ಅವರ ಶ್ರದ್ಧಾಂಜಲಿ ಸಭೆ ನಡೆಯುವ ಸಂದರ್ಭದಲ್ಲಿ ಪುಸ್ತಕ ಬಿಡುಗಡೆ ಸಮಾರಂಭ ನಡೆಯಲಿದ್ದು, ಬಳಿಕ ಪುಸ್ತಕವನ್ನು ಉಚಿತವಾಗಿ ಹಂಚಲಾಗುವುದು. ಈ ಪುಸ್ತಕವನ್ನು ನಿವೃತ್ತ ಉಪತಹಶೀಲ್ದಾರ್ ಬಿ.ಜಗನ್ನಾಥ ರೈ ಅವರು ಬರೆದಿದ್ದಾರೆ ಎಂದು ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಬಿ. ಐತ್ತಪ್ಪ ನಾಯ್ಕ್ ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here