ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ಆಮಂತ್ರಣ ಪತ್ರಿಕೆ ವಿತರಣೆ ಬಗ್ಗೆ ಪೂರ್ವಭಾವಿ ಸಭೆ

0

ಬಡಗನ್ನೂರುಃ ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಆಮಂತ್ರಣ ಪತ್ರಿಕೆ ವಿತರಣೆ ಬಗ್ಗೆ ಪೂರ್ವಭಾವಿ ಸಭೆಯು ಜ.31 ರಂದು ದೇವಸ್ಥಾನದ ವಠಾರದಲ್ಲಿ ನಡೆಯಿತು. ಬಡಗನ್ನೂರು ಹಾಗೂ ಪಡುವನ್ನೂರು ಗ್ರಾಮಗಳಲ್ಲಿ ಮನೆಮನೆಗೆ ತಲುಪಿಸಲು ಗ್ರಾ.ಪಂ ಸದಸ್ಯರಿಗೆ ಜವಾಬ್ದಾರಿ ನೀಡಿದ್ದು ಈ ಬಗ್ಗೆ ಗ್ರಾ.ಪಂ ಸದಸ್ಯರೊಂದಿಗೆ ಸಭೆ ನಡೆಸಲಾಯಿತು.


ವಾರ್ಡ್ ಸದಸ್ಯರು ಅಯಾ ಗ್ರಾಮದಲ್ಲಿ ವಾರ್ಡ್ ಮಟ್ಟದಲ್ಲಿ ಇತರ ಸಂಘ ಸಂಸ್ಥೆಗಳ ಸದಸ್ಯರನ್ನು ಸೇರಿಸಿಕೊಂಡು ತಂಡ ರಚನೆ ಮಾಡಿ ಎರಡು ದಿವಸಗಳಲ್ಲಿ ಪ್ರತಿಮನೆಗೂ ಅಮಂತ್ರಣ ಪತ್ರಿಕೆ ತಲುಪಿಸುವ ಕಾರ್ಯ ಆಗಬೇಕಿದೆ ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮನೋಜ್ ರೈ ಪೇರಾಲು ಸಭೆಯಲ್ಲಿ ತಿಳಿಸಿದರು.

ಸಭೆಯಲ್ಲಿ ಗ್ರಾ.ಪಂ ಅಧ್ಯಕ್ಷೆ ಶ್ರೀಮತಿ ಕೆ, ಉಪಾಧ್ಯಕ್ಷ ಸಂತೋಷ್ ಆಳ್ವ ಗಿರಿಮನೆ, ರವಿರಾಜ ರೈ ಸಜಂಕಾಡಿ, ಧರ್ಮೇಂದ್ರ ಕುಲಾಲ್ ಪದಡ್ಕ, ಪದ್ಮನಾಭ, ರವಿಚಂದ್ರ ಸಾರೆಪ್ಪಾಡಿ, ಕುಮಾರ ಅಂಬಟೆಮೂಲೆ, ಲಿಂಗಪ್ಪ ಮೋಡಿಕೆ, ವೆಂಕಟೇಶ್ ಕನ್ನಡ್ಕ, ದಮಯಂತಿ ನೆಕ್ಕರೆ, ಹೇಮಾವತಿ ಮೋಡಿಕೆ, ಪುಷ್ಷಲತಾ ದೇವಕಜೆ, ಸುಶೀಲ ಪಕ್ಯೋಡು, ಸವಿತಾ ನೆರೋತ್ತಡ್ಕ, ಸಂಜಾತ ಎಂ, ಜ್ಯೋತಿ ಅಂಬಟೆಮೂಲೆ, ಕಲಾವತಿ ಪಟ್ಲಡ್ಕ, ಉತ್ಸವ ಸಮಿತಿ ಅಧ್ಯಕ್ಷ ರಾಮಣ್ಣ ಗೌಡ ಬಸವಹಿತ್ತಿಲು, ಹೊರೆಕಾಣಿಕೆ ಸಂಚಾಲಕರಾದ ಸುಬ್ಬಯ್ಯ ರೈ ಹಲಸಿನಡಿ, ಜನಾರ್ದನ ಪೂಜಾರಿ ಪದಡ್ಕ, ಸಮಿತಿ ಸದಸ್ಯರಾದ ಉತ್ತಮ್ ಭಟ್ ಪಡ್ಪು, ಮನೋಹರ ರೈ ಪಡುಮಲೆ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here