ಮನವಳಿಕೆಗುತ್ತು ನೇಮೋತ್ಸವದ ಅಮಂತ್ರಣ ಪತ್ರಿಕೆ ಬಿಡುಗಡೆ

0

ಆಲಂಕಾರು: ಪೆರಾಬೆ ಗ್ರಾಮದ ಮನವಳಿಕೆಗುತ್ತುವಿನಲ್ಲಿ ಮಾ.7ರಿಂದ ಮಾ.10ರ ತನಕ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಧರ್ಮದೈವ ಧೂಮವತೀ ಬಾವನ, ರಕ್ತೇಶ್ವರೀ, ಶಿರಾಡಿ, ಪಂಜುರ್ಲಿ, ಕಲುರ್ಟಿ, ಸತ್ಯದೇವತೆ, ದೈಯ್ಯೊಂಕುಳು, ಚಕ್ರವರ್ತಿ ಕೊಡಮಣಿತ್ತಾಯ, ಇತರ ದೈವಗಳ ಹಾಗು ನಾಗಬ್ರಹ್ಮ ಸನ್ನಿಧಿಯಲ್ಲಿ ಪೂಜೆ, ಬ್ರಹ್ಮಬೈದೇರುಗಳ ನೇಮೊತ್ಸವ ನಡೆಯಲಿದ್ದು ಇದರ ಅಮಂತ್ರಣ ಪತ್ರಿಕೆಯನ್ನು ಮನವಳಿಕೆಗುತ್ತಿನಲ್ಲಿ ಬಿಡುಗಡೆಗೊಳಿಸಲಾಯಿತು.

ಮನವಳಿಕೆಗುತ್ತು ಕುಟುಂಬದ ಯಾಜಮಾನ ರಮಾನಾಥ ರೈ ಮನವಳಿಕೆ, ದೈವದೇವರು ಟ್ರಸ್ಟ್‌ನ ಅಧ್ಯಕ್ಷ ಹಾಗು ವ್ಯವಸ್ಥಾಪಕ ದಯಾನಂದ ರೈ ಮನವಳಿಕೆ, ಕಾರ್ಯದರ್ಶಿ ಪ್ರಶಾಂತ ರೈ ಮನವಳಿಕೆ, ವ್ಯವಸ್ಥಾಪಕ ಗೋಪಾಲಕೃಷ್ಣ ರೈ ಮನವಳಿಕೆ, ಗಣೇಶ್ ರೈ ಮನವಳಿಕೆ, ಆಭಿವೃದ್ದಿ ಸಮಿತಿಯ ಅಧ್ಯಕ್ಷ ವಿಠಲ ರೈ ಮನವಳಿಕೆ, ಕಾರ್ಯದರ್ಶಿ ಸುಭಾನು ರೈ ಹಾಗು ಮನವಳಿಕೆ ಗುತ್ತಿನ ಕುಟುಂಬಸ್ಥರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here