ಬಲ್ನಾಡು ಗುಂಡ್ಯಡ್ಕ ಲೀಲಾಮಣಿ ರೈಯವರಿಗೆ ಶ್ರದ್ಧಾಂಜಲಿ ಸಭೆ

0

ಪುತ್ತೂರು: ಇತ್ತೀಚೆಗೆ ನಿಧನರಾದ, ಬಲ್ನಾಡು ಗ್ರಾಮದ ಗುಂಡ್ಯಡ್ಕ ದಿ.ಶ್ರೀನಿವಾಸ ರೈಯವರ ಪತ್ನಿ ಲೀಲಾಮಣಿ ಎಸ್.ರೈಯವರಿಗೆ ಶ್ರದ್ಧಾಂಜಲಿ ಸಭೆಯು ಫೆ.18ರಂದು ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನದ ನೇತ್ರಾವತಿ ಸಭಾ ಭವನದಲ್ಲಿ ನಡೆಯಿತು.


ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ ವಿಶ್ವನಾಥ ರೈ ನುಡಿ ನಮನ ಸಲ್ಲಿಸಿದರು. ಸವಣೂರು ವಿದ್ಯಾರಶ್ಮೀ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸೀತಾರಾಮ ರೈ ಸವಣೂರು, ಎಪಿಎಂಸಿ ಮಾಜಿ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ನಿವೃತ್ತ ಡಿವೈಎಸ್‌ಪಿ ಭಾಸ್ಕರ ರೈ, ಅರುವ ಸುಭಾಸ್ ರೈ ಬೆಳ್ತಂಗಡಿ, ವೆನ್‌ಲಾಕ್ ಆಸ್ಪತ್ರೆಯ ಡಾ. ಸುಭೋದ್ ಕುಮಾರ್ ರೈ, ಡಾ.ಸುಧೀರ್ ಕುಮಾರ್, ಡಾ.ಅಶೋಕ್ ರೈ, ವಿಜಯ ಕುಮಾರ್ ರೈ ಮುಗೇರು, ಪ್ರಭಾಕರ ಹೆಗ್ಡೆ ತೀರ್ಥಹಳ್ಳಿ, ಎಪಿಎಎಂಸಿ ಮಾಜಿ ಅಧ್ಯಕ್ಷ ಸಾಜ ಕೃಷ್ಣ ಪ್ರಸಾದ್ ಭಂಡಾರಿ, ಬಿಜೆಪಿ ಗ್ರಾಮಾಂತರ ಮಂಡಳದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಉದ್ಯಮಿ ಶಿವರಾಮ ಆಳ್ವ, ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ರವೀಂದ್ರನಾಥ ರೈ, ಜಯಪ್ರಕಾಶ್ ರೈ, ಮೃತರ ಪುತ್ರರರಾದ ರಾಜ್‌ಕಿರಣ್ ರೈ, ಚಿತ್ತರಂಜನ್ ರೈ ಪುತ್ರಿ ಸುಚೇತ ಕೆ.ಮಾಡ, ಸೊಸೆಯಂದಿರಾದ ಸತ್ಯವತಿ ಆರ್ ರೈ, ಮಲ್ಲಿಕಾ ಸಿ ರೈ, ಅಳಿಯ ಕೀಶನ್‌ಚಂದ್ ಮಾಡ, ಮೊಮ್ಮಕ್ಕಳಾದ ಕೌಶಿಕ್ ಸಂದ್ ಮಾಡ, ವಿಶಾಲ್ ರಂಜನ್ ರೈ, ಡಾ| ಸಹಾನ್ ರೈ, ಮನ್‌ದೀಪ್ ರಂಜನ್ ರೈ ಸೇರಿದಂತೆ ಹಲವಾರು ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here