ಉದ್ಯಮಿ ಮಹಾಲಸ ರಮಾನಂದ ಪೈ ನಿಧನ

0

ಪುತ್ತೂರು:ಏಳ್ಮುಡಿಯಲ್ಲಿ ಮಹಾಲಸ ಟ್ರೇಡರ‍್ಸ್ ಹೆಸರಿನಲ್ಲಿ ದಿನಸಿ ಸಾಮಾಗ್ರಿಗಳ ಅಂಗಡಿ ಹೊಂದಿದ್ದ ಉದ್ಯಮಿ, ಪಂಚವಟಿ ರಸ್ತೆ ನಿವಾಸಿ ರಮಾನಂದ ಪೈ(59ವ.)ರವರು ಮಾ.6ರಂದು ಹೃದಯಾಘಾತದಿಂದ ನಿಧನರಾದರು.

ಏಳ್ಮುಡಿಯಲ್ಲಿ ಹಲವು ವರ್ಷಗಳ ವ್ಯಾಪಾರ ನಿರತರಾಗಿದ್ದು ಚಿರಪರಿಚಿತರಾಗಿದ್ದ ಅವರು ಕೆಲ ವರ್ಷಗಳಿಂದ ವ್ಯವಹಾರ ಸ್ಥಗಿತಗೊಳಿಸಿದ್ದರು. ಮಾ.6ರಂದು ಬೆಳಿಗ್ಗೆ ಅವರಿಗೆ ಮನೆಯಲ್ಲಿ ಎದೆ ನೋವು ಕಾಣಿಸಿಕೊಂಡು ತೀವ್ರ ಅಸ್ವಸ್ಥಗೊಂಡು ಹೃದಯಾಘಾತದಿಂದ ನಿಧನರಾದರು.

ಮೃತರು ತಾಯಿ ಇಂದಿರಾ ಪೈ, ಪತ್ನಿ ರಾಧಿಕಾ ಪೈ, ಅಮೇರಿಕಾದಲ್ಲಿರುವ ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ಪುತ್ರ ಶ್ರೀನಿವಾಸ ಪೈ, ಅಮೇರಿಕದಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿರುವ ಪುತ್ರಿ ಶ್ರೀಲಕ್ಷ್ಮೀ, ಸೊಸೆ, ಮೂವರು ಸಹೋದರರು, ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here