ಮಾಜಿ ಸಚಿವ ರಮಾನಾಥ ರೈರವರಿಂದ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣರವರ ಅಂತಿಮ ದರ್ಶನ

0

ವಿಟ್ಲ: ಕೆಪಿಸಿಸಿ ಕಾರ್ಯಾಧ್ಯಕ್ಷ, ಮಾಜಿ ಸಂಸದ ಆರ್.ಧ್ರುವನಾರಾಯಣ ಮೈಸೂರುರವರ ವಿಜಯ ನಗರ ಸ್ವಗ್ರಹಕ್ಕೆ ಮಾಜಿ ಸಚಿವರಾದ ಬಿ. ರಮಾನಾಥ ರೈ ಯವರು ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿ ಕುಟುಂಬ ಸದಸ್ಯರಿಗೆ ಹಾಗೂ ಕಾರ್ಯಕರ್ತರಿಗೆ ಸಾಂತ್ವನ ಹೇಳಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಆರ್ ಧ್ರುವನಾರಾಯಣ್ ಅವರ ಅಗಲಿಕೆ ಕಾಂಗ್ರೆಸ್ ಪಕ್ಷ ಮತ್ತು ರಾಜ್ಯ ರಾಜಕೀಯಕ್ಕೆ ತುಂಬಲಾರದ ನಷ್ಟ. ಕಾಂಗ್ರೆಸ್ ಪಕ್ಷ ಓರ್ವ ಕರ್ಮಯೋಗಿ ದಕ್ಷ ನಾಯಕನನ್ನು ಕಳೆದುಕೊಂಡಿದೆ. ವೈಯಕ್ತಿಕವಾಗಿ ಧ್ರುವನಾರಾಯಣ್ ಅವರ ಜೊತೆ ನನಗೆ ಉತ್ತಮ ಒಡನಾಡ ಇತ್ತು. ಅವರ ಅಗಲಿಕೆಯಿಂದ ನಾನು ಅತೀವ ದುಃಖಿತನಾಗಿದ್ದೇನೆ. ಮೈಸೂರಿನ ಅವರ ಸ್ವಗೃಹದಲ್ಲಿ ಪಾರ್ಥಿವ ಶರೀರದ ಅಂತಿಮ‌ ದರ್ಶನ ಪಡೆದಾಗ ನನ್ನ ಹೃದಯ ಭಾರವಾಯಿತು ಎಂದು ರಮಾನಾಥ ರೈರವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here