ಮಜಲುಮಾರು ದೇವಸ್ಥಾನದಲ್ಲಿ ನಗರ ಭಜನಾ ಮಂಗಳೋತ್ಸವ, ಪಾರ್ವತಿ ಸ್ವಯಂವರಪೂಜೆ

0

ಪುತ್ತೂರು:ಅಷ್ಟಬಂಧ ಬ್ರಹ್ಮಕಲಶೋತ್ಸವದ ಸಂಭ್ರಮದಲ್ಲಿರುವ ಮುಕ್ವೆ ಮಜಲುಮಾರು ಶ್ರೀಉಮಾಮಹೇಶ್ವರ ದೇವಸ್ಥಾನದಲ್ಲಿ ಮಾ.24ರಂದು ಸಂಜೆ ನಗರ ಭಜನಾ ಮಂಗಳೋತ್ಸವ ಹಾಗೂ ಪಾರ್ವತಿ ಸ್ವಯಂವರ ಪೂಜೆಯ ನೆರವೇರಿತು.

ನಿರಂತರವಾಗಿ ಮೂರು ತಿಂಗಳುಗಳ ಕಾಲ ನಡೆದ ನಗರ ಭಜನಾ ಸಂಕೀರ್ತನೆಯ ಮಂಗಳೋತ್ಸವದ ಮೆರವಣಿಗೆಯು ಸಂಜೆ ಉಪ್ಪಳ ಲಕ್ಷ್ಮೀಶ ತಂತ್ರಿಯವರ ಮನೆಯಿಂದ ಹೊರಟು ದೇವಸ್ಥಾನಕ್ಕೆ ಆಗಮಿಸಿದ ಬಳಿಕ ದೇವಸ್ಥಾನದಲ್ಲಿ ಭಜನಾ ಮಂಗಳೋತ್ಸವ ನೆರವೇರಿತು. ನಂತರ ಪ್ರತಿವರ್ಷ ನಡೆಯುವ ಪಾರ್ವತಿ ಸ್ವಯಂವರ ಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು. ಉಮಾಮಹೇಶ್ವರ ಸೇವಾ ಟ್ರಸ್ಟ್‌ನ ಅಧ್ಯಕ್ಷರು, ಪದಾಧಿಕಾರಿಗಳು, ಬ್ರಹ್ಮಕಲಶೋತ್ಸವ ಸಮಿತಿ ಪದಾಧಿಕಾರಿಗಳು ಭಜನಾ ಮಂಡಳಿಯ ಪದಾಧಿಕಾರಿಗಳು, ಸದಸ್ಯರು ಹಾಗೂ ಭಕ್ತಾದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here