ಕೆಮ್ಮಾರ: ನಿವೃತ್ತ ಅಂಗನವಾಡಿ ಸಹಾಯಕಿ ಲೀಲಾವತಿ ನಿಧನ

0

ಉಪ್ಪಿನಂಗಡಿ: ಕಡಬ ತಾಲೂಕಿನ ಕೊಯಿಲ ಗ್ರಾಮದ ಕೆಮ್ಮಾರ ಬಡಿಲ ಮನೆ ದಿ.ಕೆ.ಎಂ.ನಾರಾಯಣ ಅವರ ಪತ್ನಿ ಲೀಲಾವತಿ ಪಿ.(72ವ.)ರವರು ಅನಾರೋಗ್ಯದಿಂದ ಮಾ.26ರಂದು ಮಧ್ಯಾಹ್ನ ಸ್ವಗೃಹದಲ್ಲಿ ನಿಧನರಾದರು.

ಲೀಲಾವತಿ ಅವರು ಕೆಮ್ಮಾರ ಅಂಗನವಾಡಿ ಕೇಂದ್ರದಲ್ಲಿ ಸುಮಾರು 21 ವರ್ಷ ಅಂಗನವಾಡಿ ಸಹಾಯಕಿಯಾಗಿ ಸೇವೆ ಸಲ್ಲಿಸಿ 2011ರಲ್ಲಿ ನಿವೃತ್ತರಾಗಿದ್ದರು. ಮೃತರು ಪುತ್ರಿ ಪದ್ಮಲತಾ, ಪುತ್ರರಾದ ಸತೀಶ್ ಹಾಗೂ ಶ್ರೀಶಕುಮಾರ್ ಅವರನ್ನು ಅಗಲಿದ್ದಾರೆ.

11 ದಿನದ ಹಿಂದೆ ಪತಿ ನಿಧನ:
ಲೀಲಾವತಿಯವರ ಪತಿ, ಕೊಯಿಲ ಪಶು ಸಂಗೋಪನಾ ಇಲಾಖೆಯ ನಿವೃತ್ತ ಉದ್ಯೋಗಿ ಕೆ.ಎಂ.ನಾರಾಯಣ(ನಾಣು)ಅವರು ಮಾ.15ರಂದು ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾಗಿದ್ದರು. ಇದೀಗ ಲೀಲಾವತಿಯವರೂ ನಿಧನರಾಗಿದ್ದು ಈ ಹಿನ್ನೆಲೆಯಲ್ಲಿ ಮಾ.28ರಂದು ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ ಕೆ.ಎಂ.ನಾರಾಯಣ ಅವರ ಸದ್ಗತಿಗಾಗಿ ನಡೆಯಬೇಕಿದ್ದ ಉತ್ತರ ಕ್ರಿಯೆ ಮುಂದೂಡಲಾಗಿದೆ ಎಂದು ಮಕ್ಕಳು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here