ನೆಲ್ಯಾಡಿ-ಕೌಕ್ರಾಡಿ ಕಟ್ಟಡ ಮಾಲಕರ ಸಂಘ; ಅಧ್ಯಕ್ಷ: ಎ.ಕೆ.ವರ್ಗೀಸ್, ಕಾರ್ಯದರ್ಶಿ: ರವಿಚಂದ್ರ

0

ನೆಲ್ಯಾಡಿ: ಕಟ್ಟಡ ಮಾಲಕರ ಸಂಘ ನೆಲ್ಯಾಡಿ-ಕೌಕ್ರಾಡಿ ಇದರ 2023-24ನೇ ಸಾಲಿನ ಅಧ್ಯಕ್ಷರಾಗಿ ಡಿಯೋನಾ ಸ್ಕ್ವೇರ್ ವಾಣಿಜ್ಯ ಕಟ್ಟಡ ಮಾಲಕ ಎ.ಕೆ.ವರ್ಗೀಸ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಕೃಷ್ಣಸೌರಭ ಕಾಂಪ್ಲೆಕ್ಸ್‌ನ ಮಾಲಕ ರವಿಚಂದ್ರ ಹೊಸವಕ್ಲು ಆಯ್ಕೆಗೊಂಡಿದ್ದಾರೆ.

ಇತ್ತೀಚೆಗೆ ನಡೆದ ಸಂಘದ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಗಣೇಶ್ ಕೆ.ರಶ್ಮಿ, ಸುಲೈಮಾನ್ ಎನ್.ಎಸ್., ಕೋಶಾಧಿಕಾರಿಯಾಗಿ ಮಹಮ್ಮದ್ ಹನೀಫ್ ಸಿಟಿ, ಕಾರ್ಯದರ್ಶಿಯಾಗಿ ಜಯಕುಮಾರ್ ಶಾರದಾ ಫ್ಯಾನ್ಸಿ. ರಾಮಣ್ಣ ಗೌಡ ಗಣೇಶ್ ಟೈಲರ್, ಗೌರವ ಸಲಹೆಗಾರರಾಗಿ ಕುಶಾಲಪ್ಪ ಗೌಡ ಪೂವಾಜೆ, ಒ.ಜಿ.ನೈನಾನ್, ಕಾನೂನು ಸಲಹೆಗಾರರಾಗಿ ನೋಟರಿ ನ್ಯಾಯವಾದಿ ಇಸ್ಮಾಯಿಲ್ ಎನ್., ಸದಸ್ಯರಾಗಿ ವಿ.ಜೆ.ಮ್ಯಾಥ್ಯು, ಅಬ್ದುಲ್ ರವೂಫ್ ಎಂ.ಆರ್., ಸಂತೋಷ್ ಕುಮಾರ್ ಬಿರ್ವ, ವಿ.ಜೆ. ತಂಗಚನ್. ಹನೀಫ್ ಕರಾವಳಿ, ಮೋಹನ್ ಕುಮಾರ್ ಡಿ. ಆಯ್ಕೆಗೊಂಡಿದ್ದಾರೆ.

LEAVE A REPLY

Please enter your comment!
Please enter your name here