ಪುತ್ತೂರು ಶಾಂತಿನಾಥ ಬಸದಿಯಲ್ಲಿ ಮಹಾವೀರ ಜಯಂತಿ ಆಚರಣೆ

0

ಪುತ್ತೂರು: ಇಲ್ಲಿನ ಶಾಂತಿನಾಥ ಬಸದಿಯಲ್ಲಿ ಪುತ್ತೂರಿನ ಜೈನ ಸಮುದಾಯದವರಿಂದ ಭಗವಾನ್ ಮಹಾವೀರ ಸ್ವಾಮೀಯ 2622ನೇ ಜನ್ಮದಿನೋತ್ಸವವನ್ನು ಎ.4ರಂದು ಆಚರಿಸಲಾಯಿತು. ಮಹಾವೀರ ಸ್ವಾಮಿಗೆ ಜಲಾಭಿಷೇಕ ಮಾಡಲಾಯಿತು.

ನಿವೃತ್ತ ಉಪನ್ಯಾಸಕರಾದ ರಾಜವೀರ ಇಂದ್ರ ಬಳ್ಳಮಂಜರವರು ಮಾತನಾಡಿ ಜೈನ ಸಮಾಜದ ಆಚರಣೆ, ಅಹಿಂಸಾ ತತ್ವ ಮತ್ತು ಆತ್ಮ ಕಲ್ಯಾಣ ಮಾಡುವುದರ ಬಗ್ಗೆ ವಿವರಿಸಿದರು. ಶಾಂತಿನಾಥ ಸ್ವಾಮಿಗೆ ಮಹಾಮಂಗಳಾರತಿ, ಮಾತೆ ಪದ್ಮಾವತಿಗೆ ಪುಷ್ಪಾಲಂಕಾರ, ಪೂಜಾ ಕಾರ್ಯಕ್ರಮ ನಡೆಯಿತು.

ವೇದಿಕೆಯಲ್ಲಿ ಗುಣಪಾಲ್ ಜೈನ್ ಉಪಸ್ಥಿತರಿದ್ದರು. ಸುದರ್ಶನ್ ಜೈನ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here