ದ್ವಿತೀಯ ಪಿಯುಸಿ ಪರೀಕ್ಷೆ : ಆಧಿರ ಬಿ.ಆರ್. ರವರಿಗೆ 92%  

0

ಪಾಣಾಜೆ: ಕಳೆದ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ತೆಂಕಿಲ ನರೇಂದ್ರ ಪದವಿ ಪೂರ್ವ ಕಾಲೇಜಿನ‌ ಆಧಿರ ಬಿ.ಆರ್. ರವರು ಶೇ. 92 (551/600) ಅಂಕಗಳನ್ನು ಪಡೆದು ಸಾಧನೆ ಮಾಡಿದ್ದಾರೆ.

ಈಕೆ ಪಾಣಾಜೆ ಸಿ. ಎ ಬ್ಯಾಂಕ್ ನಿರ್ದೇಶಕ  ರವೀಂದ್ರ ಭಂಡಾರಿ ಮತ್ತು ರಾಧಿಕ ಭಂಡಾರಿಯವರ ಸುಪುತ್ರಿಯಾಗಿದ್ದಾರೆ. ಕಲಿಕೆಯಲ್ಲಿ ಮಾತ್ರವಲ್ಲದೇ ಬಹುಮುಖ ಪ್ರತಿಭೆಯಾಗಿರುವ ಇವರು ಗಡಿನಾಡ ಧ್ವನಿ ಕಲಾಶ್ರೀ ರಾಜ್ಯ ಪ್ರಶಸ್ತಿ, ಸುದ್ದಿ ಬಳಗದ ಕೊಡಮಾಡುವ ಪ್ರತಿಭಾರಂಗ ಪ್ರತಿಭಾದೀಪ ಪುರಸ್ಕಾರ ಪಡೆದಿರುತ್ತಾರೆ. ಭರತನಾಟ್ಯ ದಲ್ಲಿ ಜೂನಿಯರ್ ಮತ್ತು ಶಾಸ್ತ್ರೀಯ ಸಂಗೀತ ಕಲಿಯುತ್ತಿದ್ದಾರೆ.

LEAVE A REPLY

Please enter your comment!
Please enter your name here