ಹಿಂದೂ ನಾಯಕನಾಗಬೇಕಾದರೆ ಎಮ್.ಎಲ್ ಎ ಆಗಲೇ ಬೇಕಾ? – ಅರುಣ್ ಕುಮಾರ್ ಪುತ್ತಿಲರಿಗೆ ಡಾ.ಎಂ.ಕೆ ಪ್ರಸಾದ್ ಪ್ರಶ್ನೆ

0

ಪುತ್ತೂರು: ಹಿಂದುತ್ವಕ್ಕಾಗಿ ವೀರ ಸಾವರ್ಕರ್, ದೀನ್ ದಯಾಳ್ ಉಪಾಧ್ಯಾಯ ಸೇರಿದಂತೆ ಹಲವಾರು ಮಂದಿ ಹೋರಾಟ ಮಾಡಿದ್ದಾರೆ. ಅವರಿಗೆ ಯಾವ ಆಕಾಂಕ್ಷೆಯೂ ಇರಲಿಲ್ಲ. ಅರುಣ್ ಕುಮಾರ್ ಪುತ್ತಿಲ ಹಿಂದೂ ನಾಯಕ ಎಂದು ಹೇಳಿಕೊಂಡು ಎಮ್ ಎಲ್.ಎ ಆಗುವ ಆಕಾಂಕ್ಷೆ ಇಟ್ಟುಕೊಂಡಿದ್ದಾರೆ. ಹಿಂದೂ ನಾಯಕನಾಗಬೇಕಾದರೆ ಎಮ್ ಎಲ್ ಎ ಆಗಲೇ ಬೇಕಾ ಎಂದು ಡಾ.ಎಂ.ಕೆ ಪ್ರಸಾದ್ ಅರುಣ್ ಕುಮಾರ್ ಪುತ್ತಿಲ ಅವರಿಗೆ ಪ್ರಶ್ನೆ ಮಾಡಿದ್ದಾರೆ.


ನಮಗೆ ಗಲಾಟೆ ಮಾಡುವವರು ಅಲ್ಲ. ಶಾಂತವಾಗಿ, ಅಭಿವೃದ್ಧಿಯ ಬಗ್ಗೆ ಆಲೋಚನೆ ಮಾಡಿ ಎಲ್ಲರ ಸಮಸ್ಯೆಗಳನ್ನು ಆಲಿಸುವಂತ ಶಾಸಕರು ನಮಗೆ ಬೇಕು. ಸಂಘರ್ಷ ಮಾಡುವವರು ಬೇಕಾಗಿಲ್ಲ .ಪ್ರಸ್ತುತ ನಮಗೆ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಅವರಂತಹ ಅಭ್ಯರ್ಥಿ ಬೇಕು. ಅರುಣ್ ಕುಮಾರ್ ಪುತ್ತಿಲರಂತೆ ಶೋ ಮಾಡುವವರು ಬೇಕಾಗಿಲ್ಲ ಎಂದು ಹೇಳಿದ್ದಾರೆ.


ಪತ್ರಿಕಾಗೋಷ್ಠಿಯಲ್ಲಿ ರಾಜೇಶ್ ಬನ್ನೂರು, ಶಂಭು ಭಟ್, ಚಂದ್ರಶೇಖರ್ ರಾವ್ ಬಪ್ಪಳಿಗೆ, ಸಹಜ್ ರೈ ಬಳಜ್ಜ ಉಪಸ್ಥಿತರಿದ್ದರು‌.

LEAVE A REPLY

Please enter your comment!
Please enter your name here