ಚೆಕ್ ಅಮಾನ್ಯ ಪ್ರಕರಣ- ವಾರಂಟ್ ಆರೋಪಿ ಕಾವೇರಿಕಟ್ಟೆಯ ತೀರ್ಥರಾಮ ಎಚ್.ಎಸ್ ಬಂಧನ

0

ಪುತ್ತೂರು: ಚೆಕ್ ಅಮಾನ್ಯ ಪ್ರಕರಣಕ್ಕೆ ಸಂಬಂಧಿಸಿ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿ ಕಾವೇರಿಕಟ್ಟೆ ನಿವಾಸಿ ತೀರ್ಥರಾಮ ಹೆಚ್ ಎಸ್ ಎಂಬವರನ್ನು ಪುತ್ತೂರು ಪೊಲೀಸರು ಬಂಧಿಸಿದ್ದಾರೆ.


ದರ್ಬೆ ಕಾವೇರಿಕಟ್ಟೆ ನಿವಾಸಿ ಸದಾಶಿವ ಆಚಾರ್ಯ ಅವರ ಪುತ್ರ ಕುಂದಾಪುರದಲ್ಲಿ ತಂಪುಪಾನಿಯ ವ್ಯವಹಾರ ನಡೆಸುತ್ತಿರುವ ತೀರ್ಥರಾಮ ಹೆಚ್.ಎಸ್ ಎಂಬಾತ ಬಂಧಿತ ಆರೋಪಿ. ಈತ ಸುಮಾರು 7 ವರ್ಷಗಳ ಹಿಂದೆ ಪುತ್ತೂರಿನ ಕೆಲವು ಸಂಸ್ಥೆಗಳಿಂದ ಸಾಲಕ್ಕೆ ಸಂಬಂಧಿಸಿ ನೀಡಿದ ಚೆಕ್ ಅಮಾನ್ಯಗೊಂಡು ನ್ಯಾಯಾಲಯಲ್ಲಿ ಪ್ರಕರಣ ದಾಖಲಾಗಿತ್ತು. ತೀರ್ಥರಾಮ ಅವರು ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದರು. ನ್ಯಾಯಾಲಯ ಆರೋಪಿಗೆ ವಾರಂಟ್ ಜಾರಿ ಮಾಡಿತ್ತು. ಪುತ್ತೂರು ಪೊಲೀಸರು ತನಿಖೆ ಕೈಗೆತ್ತಿಕೊಂಡು ಆರೋಪಿ ಪುತ್ತೂರಿಗೆ ಬರುವ ಖಚಿತ ಮಾಹಿತಿ ಪಡೆದು ಎ.26ರಂದು ಬೆಳಗ್ಗಿನ ಜಾವ ಆರೋಪಿಯನ್ನು ಆತನ ಮನೆಯಿಂದ ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು,ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

LEAVE A REPLY

Please enter your comment!
Please enter your name here