ಆರ್ಯಾಪು ನೇರಳಕಟ್ಟೆ ಕೊರಗಜ್ಜನಲ್ಲಿ ಅಭಯ ಬೇಡಿದ ಜೆಡಿಎಸ್ ಅಭ್ಯರ್ಥಿ ದಿವ್ಯ ಪ್ರಭಾ ಗೌಡ

0

ಪುತ್ತೂರು : ಕರ್ನಾಟಕ ವಿಧಾನಸಭಾ ಚುನಾವಣೆ ಮೇ.10ರಂದು ನಡೆಯಲಿದ್ದು, ಎಲ್ಲಾ ಅಭ್ಯರ್ಥಿಗಳು ಮತದಾರರನ್ನು ಒಲಿಸಿಕೊಳ್ಳಲು ನಾನಾ ರೀತಿಯ ಕಸರತ್ತುಗಳನ್ನು ಮಾಡತೊಡಗಿದ್ದಾರೆ. ಅದರೊಂದಿಗೆ ಅದೃಷ್ಟವೂ ಕೈಗೂಡಲೆಂದು ದೇವಾನುದೇವತೆಗಳ ಅಭಯವನ್ನು ಯಾಚಿಸುತ್ತಿದ್ದಾರೆ.

ಪುತ್ತೂರು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ದಿವ್ಯ ಪ್ರಭ ಗೌಡ ಕ್ಷೇತ್ರದಾದ್ಯಂತ ತೆನೆ ಹೊತ್ತು ಬಿರುಸಿನ ಪ್ರಚಾರದಲ್ಲಿ ತೊಡಗಿರುವುದರ ನಡುವೆ ಆರ್ಯಾಪು ನೇರಳಕಟ್ಟೆಯ ಶ್ರೀ ಅಮ್ಮನವರ ದೇವಸ್ಥಾನಕ್ಕೆ ಮತ್ತು ಆರ್ಯಾಪು ಕೊರಗಜ್ಜ ಕ್ಷೇತ್ರಕ್ಕೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜೆಡಿಎಸ್ ಜಿಲ್ಲಾಧ್ಯಕ್ಷ ಜಾಕೆ ಮಾಧವ ಗೌಡ, ಪದ್ಮಮಣಿ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here