ಕಾಂಗ್ರೆಸ್ ನಾವಿಕನಿಲ್ಲದ ಹಡಗು – ಬಿಜೆಪಿ ರಾಜ್ಯಕಾರ್‍ಯಕಾರಿಣಿ ಸದಸ್ಯ ಮೋನಪ್ಪ ಭಂಡಾರಿ ಆರೋಪ

0

ಪುತ್ತೂರು: ಕಾಂಗ್ರೆಸ್ ಇವತ್ತು ನಾವಿಕನಿಲ್ಲದ ಹಡಗು. ಅದು ಯಾವಾಗ ಬೇಕಾದರೂ ಮುಳುಗಬಹುದು. ಯಾಕೆಂದರೆ ಮೋಸ, ವಂಚನೆ, ಭ್ರಷ್ಟಾಚಾರ ಕಾಂಗ್ರೆಸ್‌ನ ವಂಶಪಾರಂಪರ್ಯವಾಗಿದೆ . ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಇದು ಕಾಂಗ್ರೆಸ್‌ನಿಂದ ಕಿವಿಗೆ ಗೊಂಡೆ ಹೂವು ಇಡುವ ತಂತ್ರ. ಆದರೆ ಬಿಜೆಪಿ ಜಗತ್ತಿನಲ್ಲೇ ನಂ. 1 ಪಾರ್ಟಿ ಎಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯರಾಗಿರುವ ವಿಧಾನಪರಿಷತ್ ಮಾಜಿ ಸದಸ್ಯ ಮೋನಪ್ಪ ಭಂಡಾರಿ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.


ರಾಹುಲ್ ಗಾಂಧಿ 5ನೇ ಗ್ಯಾರೆಂಟಿ ಘೋಷಣೆ ಮಾಡಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಎಂದು ಹೇಳಿದ್ದಾರೆ. ಈ ವ್ಯವಸ್ಥೆಯನ್ನು ಎಲ್ಲಿಂದ ನಿರ್ವಹಣೆ ಮಾಡುತ್ತಾರೆ. ಈ ಹಿಂದೆ ಬಜೆಟ್ ಮಂಡನೆ ಮಾಡುವಾಗ ಬಿಜೆಪಿಯವರು ಕಿವಿಗೆ ಹೂವು ಇಡುತ್ತಾರೆಂದು ಹೇಳುತ್ತಿದ್ದ ಕಾಂಗ್ರೆಸ್ ನಾಯಕರು ಇವತ್ತು ಕಾಂಗ್ರೆಸ್‌ನಿಂದ ಗೊಂಡೆ ಹೂವನ್ನೇ ಇಡುತ್ತಿದ್ದಾರೆ. ಯೋಜನೆಯನ್ನು ಘೋಷನೆ ಮಾಡುವಾಗ ಯಾವ ಮೂಲದಿಂದ ಅದರ ನಿರ್ವಹಣೆ ಮಾಡುತ್ತಾರೆಂಬ ಯೋಚನೆ ಬೇಕು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ಮಾಧ್ಯಮ ಪ್ರಮುಖ್ ಚಂದ್ರಶೇಖರ್ ರಾವ್ ಬಪ್ಪಳಿಗೆ, ಚುನಾವಣಾ ಕಚೇರಿ ಸಹ ಉಸ್ತುವಾರಿ ಶಿವಕುಮಾರ್ ಕಲ್ಲಿಮಾರ್, ನಗರಸಭೆ ಸದಸ್ಯೆ ಗೌರಿ ಬನ್ನೂರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here