ಮೇ 1 ರಿಂದ 7: ಇಚ್ಲಂಪಾಡಿ ಸೈಂಟ್ ಜೋರ್ಜ್ ಓರ್ಥಡೋಕ್ಸ್ ಸಿರಿಯನ್ ಚರ್ಚ್‌ನ ವಾರ್ಷಿಕ ಹಬ್ಬ

0

ನೆಲ್ಯಾಡಿ: ಸಂತ ಜೋರ್ಜರ ನಾಮದಲ್ಲಿ ಪ್ರಸಿದ್ಧಿ ಹೊಂದಿರುವ ಕರ್ನಾಟಕದ ಪ್ರಥಮ ಜೋರ್ಜಿಯನ್ ತೀರ್ಥಾಟನಾ ಕೇಂದ್ರವಾದ ಇಚ್ಲಂಪಾಡಿ ಸೈಂಟ್ ಜೋರ್ಜ್ ಓರ್ಥಡೋಕ್ಸ್ ಸಿರಿಯನ್ ದೇವಾಲಯದ ವಾರ್ಷಿಕ ಹಬ್ಬ ಮೇ 1 ರಿಂದ 7 ರ ತನಕ ಬ್ರಹ್ಮಾವರ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂ.ಯಾಕೋಬ್ ಮಾರ್ ಏಲಿಯಾಸ್ ಮೆತ್ರಾಪೋಲೀತ್ತಾ ಹಾಗೂ ಇಡುಕ್ಕಿ ಭದ್ರಾಸನ ಮೆತ್ರಾಪೋಲಿತ್ತಾ ಅತೀ ವಂ.ಸಖರಿಯಾ ಮಾರ್ ಸೇವೇರಿಯೋಸ್ ಮೆತ್ರಪ್ಪೋಲಿತ್ತಾ ರವರ ನೇತೃತ್ವದಲ್ಲಿ ಮತ್ತು ಅನೇಕ ಧರ್ಮಗುರುಗಳ ಸಹಕಾರದೊಂದಿಗೆ ನಡೆಯಲಿದೆ ಎಂದು ಚರ್ಚ್‌ನ ಧರ್ಮಗುರುಗಳಾದ ರೆ.ಫಾ.ಪೌಲ್ ಜೇಕಬ್, ಕಾರ್ಯದರ್ಶಿ ವಿ.ಎನ್.ಚಾಕೋ, ಕೋಶಾಧಿಕಾರಿ ಜೋನ್ ಅಬ್ರಹಾಂ ಚೀರಮಟ್ಟಂರವರು ತಿಳಿಸಿದ್ದಾರೆ.


ಮೇ 1 ರಂದು ಬೆಳಿಗ್ಗೆ 9.30ಕ್ಕೆ ಬ್ರಹ್ಮಾವರ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂ.ಯಾಕೋಬ್ ಮಾರ್ ಏಲಿಯಾಸ್ ಮೆತ್ರಾಪೋಲೀತ್ತಾರವರು ಹಬ್ಬದ ಧ್ವಜಾರೋಹಣ ನೆರವೇರಿಸಲಿದ್ದಾರೆ.


ಪವಿತ್ರ ದಿವ್ಯಬಲಿಪೂಜೆ:
ಮೇ 1ರಿಂದ 7ರ ತನಕ ಪ್ರತಿದಿನ ಬೆಳಿಗ್ಗೆ 7 ಗಂಟೆಗೆ ಪ್ರಭಾತ ಪ್ರಾರ್ಥನೆ, 7.45 ಗಂಟೆಗೆ ಪವಿತ್ರ ದಿವ್ಯ ಬಲಿಪೂಜೆ, ಸಂತ ಜೋರ್ಜರೊಂದಿಗಿನ ಮಧ್ಯಸ್ಥ ಪ್ರಾರ್ಥನೆ, ಮಧ್ಯಾಹ್ನ 12.30ಕ್ಕೆ ಮಧ್ಯಾಹ್ನದ ಪ್ರಾರ್ಥನೆ, ಸಂಜೆ 6.00 ಗಂಟೆಗೆ ಸಂಧ್ಯಾ ಪ್ರಾರ್ಥನೆ ನಡೆಯಲಿದೆ. ಮೇ 1 ರಂದು ಬ್ರಹ್ಮಾವರ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂ.ಯಾಕೋಬ್ ಮಾರ್ ಏಲಿಯಾಸ್ ಮೆತ್ರಾಪೋಲಿತ್ತಾ, ಮೇ 2 ರಂದು ನೀಲೇಶ್ವರ ನರ್ಕಲಕಾಡು ಸೈಂಟ್ ಮೇರಿಸ್ ಓರ್ಥಡೋಕ್ಸ್ ಚರ್ಚ್‌ನ ಧರ್ಮಗುರು ರೆ.ಫಾ.ಜೋಸೆಫ್ ವರ್ಗೀಸ್, ಮೇ 3 ರಂದು ರೆ.ಫಾ.ಸಿಜಿನ್ ಮ್ಯಾಥ್ಯು ಎಮ್‌ಜಿಒಸಿಎಸ್‌ಎಮ್ ಮಣಿಪಾಲ, ಮೇ 4 ರಂದು ಬ್ರಹ್ಮಾವರ ಸೈಂಟ್ ಮೇರಿಸ್ ಓರ್ಥಡೋಕ್ಸ್ ಕಥೀಡ್ರಲ್‌ನ ಸಹಾಯಕ ಧರ್ಮಗುರು ರೆ.ಫಾ.ಜೋಸೆಫ್ ಚಾಕೋ, ಮೇ 5 ರಂದು ಕೊಯಂಬತ್ತೂರು ಮೆಟ್ಟಪಾಳಯಂ ಸೈಂಟ್ ಗ್ರಿಗೋರಿಯೋಸ್ ಓರ್ಥಡೋಕ್ಸ್ ಚರ್ಚ್‌ನ ಧರ್ಮಗುರು ರೆ.ಫಾ.ಸ್ಟಾನ್‌ಲಿ ಟಿ.ಫ್ರಾನ್ಸಿಸ್, ಮೇ 6 ರಂದು ಕಾಸರಗೋಡು ಸೈಂಟ್ ಮೇರೀಸ್ ಓರ್ಥಡೋಕ್ಸ್ ಚರ್ಚ್‌ನ ಧರ್ಮಗುರು ರೆ.ಫಾ.ಗೀವರ್ಗೀಸ್ ಮಾಥ್ಯು, ಮೇ 7 ರಂದು ಮಲಂಕರ ಓರ್ಥಡೋಕ್ಸ್ ಸಿರಿಯನ್ ಚರ್ಚ್ ಇಡುಕ್ಕಿ ಧರ್ಮಪ್ರಾಂತ್ಯದ ನಿ.ವ.ದಿವ್ಯಶ್ರೀ ಸಖರಿಯಾ ಮಾರ್ ಸೇವೇರಿಯೋಸ್ ಮೆತ್ರಪ್ಪೋಲಿತ್ತಾರವರ ನೇತೃತ್ವದಲ್ಲಿ ಪವಿತ್ರ ದಿವ್ಯ ಬಲಿಪೂಜೆ ನಡೆಯಲಿದೆ. ಮೇ 4 ರಂದು ಕನ್ನಡ ಮತ್ತು ಕೊಂಕಣಿ ಭಾಷೆಯಲ್ಲಿ ಪೂಜೆ ನೆರವೇರಿಲಿದೆ.

ಮೇ 6 ರಂದು ಸಂಜೆ ಪಾದಯಾತ್ರಿಗರಿಗೆ ಸ್ವಾಗತ, ಸಂಧ್ಯಾ ಪ್ರಾರ್ಥನೆ, ಹಬ್ಬದ ಸಂದೇಶ, ಕಾಯರ್ತಡ್ಕ ಶಿಲುಬೆಯ ತನಕ ಮೆರವಣಿಗೆ, ಆಶೀರ್ವಾದ, ಅನ್ನಸಂತರ್ಪಣೆ ನಡೆಯಲಿದೆ. ಮೇ 7 ರಂದು ಬೆಳಿಗ್ಗೆ 7.30 ಪ್ರಭಾತ ಪ್ರಾರ್ಥನೆ 8.30 ದಿವ್ಯಬಲಿಪೂಜೆ, ಹಬ್ಬದ ಸಂದೇಶ, ಜಾರ್ಜಿಯನ್ ಪುರಸ್ಕಾರ ಪ್ರದಾನ, ಮಧ್ಯಾಹ್ನ ಅನ್ನಸಂತರ್ಪಣೆ, ಶಿಲುಬೆ ಹರಕೆ, ಉರುಳು ಸೇವೆ, ಹೊಸಂಗಡಿ ಶಿಲುಬೆಯ ವರೆಗೆ ಮೆರವಣಿಗೆ, ಆಶೀರ್ವಾದ, ಪ್ರಸಾದ ವಿತರಣೆ, ಸಂಜೆ ಹಬ್ಬದ ಧ್ವಜ ಇಳಿಸುವಿಕೆ, ಸಮಾರೋಪ ಪ್ರಾರ್ಥನೆ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.

ಉರುಳು ಸೇವೆಗೆ ಅವಕಾಶ:
ಮೇ 1ರಿಂದ 7ರ ತನಕ ದಿವ್ಯಬಲಿಪೂಜೆಯ ನಂತರ ಭಕ್ತರಿಗೆ ಹರಕೆ, ಕಾಣಿಕೆಗಳನ್ನು ಸಲ್ಲಿಸಲು, ಭಜನೆ ಕೂರಲು ಅವಕಾಶವಿದೆ ಹಾಗೂ ಪ್ರತಿದಿನ ಸಂಧ್ಯಾ ಪ್ರಾರ್ಥನೆ ನಂತರ ಉರುಳು ಸೇವೆಗೆ ಅವಕಾಶವಿದೆ. ಮೇ 6 ಮತ್ತು 7 ರಂದು ಮೆರವಣಿಗೆಗೆ ಮೊದಲು ಉರುಳು ಸೇವೆಗೆ ಅವಕಾಶವಿದೆ. ಉರುಳು ಸೇವೆ ಮಾಡುವವರು ಸಭ್ಯವಾದ ಸಮವಸ್ತ್ರ ಧಾರಣೆ ಮಾಡತಕ್ಕದ್ದು. ಮೇ 7 ರಂದು ಇಚ್ಲಂಪಾಡಿಯಿಂದ ನೆಲ್ಯಾಡಿ, ಕಡಬ, ಧರ್ಮಸ್ಥಳ, ಉಪ್ಪಿನಂಗಡಿ ಕಡೆಗೆ ಕೆಎಸ್‌ಆರ್‌ಟಿಸಿ ಬಸ್ ಸರ್ವೀಸ್ ಇದೆ ಎಂದು ಚರ್ಚ್‌ನ ಧರ್ಮಗುರು ರೆ.ಫಾ.ಪೌಲ್ ಜೇಕಬ್‌ರವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here