ಪುತ್ತೂರು ಎಪಿಎಂಸಿ ಪ್ರಾಂಗಣದಲ್ಲಿ ಮತ ಭೇಟೆಯಾಡಿದ ದಿವ್ಯ ಪ್ರಭಾ

0

ಪುತ್ತೂರು: ಕರ್ನಾಟಕ ರಾಜ್ಯ ವಿಧಾನ ಸಭೆ ಚುನಾವಣೆಯ ದಿನಾಂಕ ಸಮೀಪಿಸುತ್ತಿರುವಂತೆಯೇ ರಾಜಕೀಯ ಪಕ್ಷದ ಅಭ್ಯರ್ಥಿಗಳು ಭರಾಟೆಯ ಪ್ರಚಾರಕ್ಕೆ ತೊಡಗಿದ್ದು ಪುತ್ತೂರಿನ ಚುನಾವಣಾ ಕಣ ಇತರ ಕ್ಷೇತ್ರಗಳಿಗಿಂತ ಭಿನ್ನವಾಗಿ ರಂಗೇರಿಸಿಕೊಂಡಿದೆ.

ಬಿಜೆಪಿ ತೊರೆದು ಪಕ್ಷೇತರನಾಗಿ ಸ್ಪರ್ದಿಸುತ್ತಿರುವ ಅರುಣ್‌ ಕುಮಾರ್‌ ಪುತ್ತಿಲ, ಕಾಂಗ್ರೆಸ್‌ ತೊರೆದು ತೆನೆ ಹೊತ್ತ ದಿವ್ಯ ಪ್ರಭಾ ಗೌಡ, ಪ್ರಚಾರದಲ್ಲಿ ತಮ್ಮದೇ ಛಾಪು ಮೂಡಿಸಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಜೆಡಿಎಸ್‌ ಅಭ್ಯರ್ಥಿ ದಿವ್ಯ ಪ್ರಭಾ ಇಂದು ಪುತ್ತೂರು ಎಪಿಎಂಸಿ ಪ್ರಾಂಗಣದಲ್ಲಿ ಮತ ಭೇಟೆ ನಡೆಸಿದರು. ಪ್ರಾಂಗಣದ ಎಲ್ಲಾ ವರ್ತಕರನ್ನು ಭೇಟಿಯಾದ ದಿವ್ಯ ಪ್ರಭಾ ನಾಳಿನ ಭವಿಷ್ಯಕ್ಕಾಗಿ ಜೆಡಿಎಸ್‌ ಬೆಂಬಲಿಸುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here