ಪೆರುವಾಯಿಯಲ್ಲಿ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆ

0


ಬಿಜೆಪಿಯವರಿಂದಲೇ ಬಿಜೆಪಿ ಮುಕ್ತ ಕರ್ನಾಟಕ ಆಗಲಿದೆ: ಶಕುಂತಳಾ ಶೆಟ್ಟಿ


ಪುತ್ತೂರು: ಕಾಂಗ್ರೆಸ್ ಮುಕ್ತ ಭಾರತ ‌ನಿರ್ಮಾಣ ಮಾಡುತ್ತೇವೆ ಎಂದು ಬಿಜೆಪಿ ಪದೇ ಪದೇ ಹೇಳುತ್ತಿತ್ತು ಆದರೆ ಅದು ಉಲ್ಟಾ ಹೊಡೆದಿದ್ದು, ಬಿಜೆಪಿವರೇ ಸೇರಿಕೊಂಡು ಬಿಜೆಪಿ ಮುಕ್ತ ಕರ್ನಾಟಕ ಆರಂಭವಾಗಿದೆ ಎಂದು ಮಾಜಿ‌ ಶಾಸಕಿ ಶಕುಂತಳಾ ಶೆಟ್ಟಿ ಹೇಳಿದರು.


ಬಿಜೆಪಿ ಕಟ್ಟಿ‌ ಬೆಳೆಸಿದವರೇ ಕಾಂಗ್ರೆಸ್ ಬಾಗಿಲು ತಟ್ಟುತ್ತಿದ್ದಾರೆ, ಕೆಲವರು ಈಗಾಗಲೇ ಸೇರಿದ್ದಾರೆ. ಉಳಿದ ಅಲ್ಲೊಂದು ಕಡೆ ಇಲ್ಲೊಂದು ಕಡೆ ಹಿಂದುತ್ವದ ಹೆಸರಲ್ಲಿ ಬೀದಿಗೆ ಬಿದ್ದಿದೆ ಎಂದು ಹೇಳಿದರು.

ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಬರುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದರು. ಪುತ್ತೂರಿನಲ್ಲಿ ಮುಂದೆ ಅಭಿವೃದ್ದಿಯಾಗಲಿದೆ, ಕಾಂಗ್ರೆಸ್ ಗೆಲ್ಲಲಿದೆ ಎಂದು ಹೇಳಿದರು. ವೇದಿಕೆಯಲ್ಲಿ ಮಂಜೇಶ್ವರ ಶಾಸಕ ಅಶ್ರಫ್, ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here