ಪುತ್ತೂರು : ಕಾಲೊನಿಗಳಿಗೆ ಅಭ್ಯರ್ಥಿ ಅಶೋಕ್ ರೈ ಕಾಲ್ನಡಿಗೆ

0

ಪುತ್ತೂರು: ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈಯವರು ಕಳೆದ‌ ಮೂರು ದಿನಗಳಿಂದ ಕ್ಷೇತ್ರದಾದ್ಯಂತ ಕಾಲೊನಿಗಳಿಗೆ ಕಾಲ್ನಡಿಗೆ‌ ಮೂಲಕ ಮೆ.7ರಂದು ನಿಡ್ಪಳ್ಳಿ, ಇರ್ದೆ,ಪಾಣಾಜೆ,ಕೊಳ್ತಿಗೆ,ಕೆಯ್ಯೂರು ಗ್ರಾಮಗಳ‌ ದಲಿತ ಕಾಲೊನಿಗಳಿಗೆ ಭೇಟಿ ನೀಡಿದರು.

ಕಾಲೊನಿ‌ ನಿವಾಸಿಗಳು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು.‌ಹೆಚ್ಚಿನ‌ ಮನೆಗಳಿಗೆ ಮನೆಯ ಅಡಿಸ್ಥಳದ ದಾಖಲೆ ಇಲ್ಲದ ಬಗ್ಗೆ ಮತ್ತು‌94 ಸಿ ಅರ್ಜಿ ಹಾಕಿದರೂ ಹಕ್ಕು ಪತ್ರ ನೀಡದೆ ಇರುವ ಬಗ್ಗೆ ರೈಯವರ‌ ಗಮನಕ್ಕೆ ತಂದರು.‌ ಅಳಲು ತೋಡಿಕೊಂಡ ಕಾಲನಿ ನಿವಾಸಿಗಳು ” 94 ಸಿ ಹಕ್ಕು ಪತ್ರ ನೀಡುವುದಾಗಿ ನಮ್ಮಿಂದ ಹಣ ತೆಗೆದುಕೊಂಡಿದ್ದಾರೆ. ಕಳೆದ ಮೂರು‌ ವರ್ಷಗಳಿಂದ ಹಕ್ಕ ಪತ್ರ ನೀಡದೆ ವಂಚನೆ‌ ಮಾಡಿದ್ದಾರೆ ಎಂದು ಆರೋಪಿಸಿದರು.

ಕಾಂಗ್ರೆಸ್ ಗೆಲ್ಲಿಸಿ‌ ನಿಮ್ಮ‌ ಮನೆಗೆ ಹಕ್ಕು ಪತ್ರ ತಲುಪಿಸುವ ಕೆಲಸ ಮಾಡುತ್ತೇನೆ. ಯಾರಿಗಾದರೂ ಹಣ ಕೊಟ್ಟಿದ್ದರೆ ಅದನ್ನು ವಾಪಸ್ ತೆಗೆದುಕೊಳ್ಳಿ ಯಾರಿಗೂ ಹಣಕೊಡಬೇಡಿ ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಬ್ಲಾಕ್ ಅಧ್ಯಕ್ಷರಾದ ‌‌‌ ಎಂ ಬಿ ವಿಶ್ವನಾಥ ರೈ, ಕೃಷ್ಣಪ್ರಸಾದ್ ಆಳ್ವ ಸೇರಿದಂತೆ ಕಾಂಗ್ರೆಸ್ ಮುಖಂಡರು ಇದ್ದರು

LEAVE A REPLY

Please enter your comment!
Please enter your name here