ಕಲ್ಲಾರೆಯಲ್ಲಿ ಅರೆಬಿಯನ್ ಬುರ್ಖಾ ಶುಭಾರಂಭ

0

ಶುಭಾರಂಭದ ಪ್ರಯುಕ್ತ ಮೇ 31ರವರೆಗೆ ಶೇ.50 ರಿಯಾಯಿತಿ

ಪುತ್ತೂರು: ಪುತ್ತೂರಿನ ವಿವಿಧೆಡೆ ಕಾರ್ಯಾಚರಿಸುತ್ತಿರುವ ಡಿಎ ಬುರ್ಖಾ ಸಂಸ್ಥೆಯ ನೂತನ ಸಂಸ್ಥೆಯಾದ ಡಿಎ ಅರೆಬಿಯನ್ ಬುರ್ಖಾ ಕಲ್ಲಾರೆ ಗಿರಿಜಾ ಕ್ಲಿನಿಕ್ ಸಮೀಪದ ರಾಮ್‌ಮೋಹನ್ ಬಿಲ್ಡಿಂಗ್‌ನಲ್ಲಿ ಮೇ 15ರಂದು ಶುಭಾರಂಭಗೊಂಡಿತು. ನೂತನ ಸಂಸ್ಥೆಯನ್ನು ಅಸೈಯದ್ ಅಲಿ ತಂಳ್ ಕುಂಬೋಳ್ ರವರು ಉದ್ಘಾಟಿಸಿ ಸಂಸ್ಥೆಯು ಉತ್ತರೋತ್ತರವಾಗಿ ಬೆಳೆಯಲಿ ಎಂದು ಶುಭಹಾರೈಸಿದರು. ಪುತ್ತೂರು ಮುದರ್ರಿಸ್ ಅಸೈಯದ್ ಅಹಮದ್ ಪೂಕೋಯ ತಂಳ್ ಹಾಗೂ ಮೆಹಮೂದುಲ್ ಫೈಝಿ ಓಲೆಮುಂಡೋವುರವರು ದುಆ ನೆರವೇರಿಸಿದರು. ದರ್ಬೆ ಮಹಮದೀಯ ಮಸೀದಿಯ ಅಧ್ಯಕ್ಷ ಹಾಜಿ ಅಬ್ದುಲ್ ರಹಿಮಾನ್ ಅಝಾದ್, ಮಸೀದಿಯ ಖತೀಬ್ ಅಬ್ದುಲ್ ಕರೀಂ ದಾರಿಮಿ, ಸಿರಾಜುದ್ದೀನ್ ಫೈಝಿ ಬಪ್ಪಳಿಗೆ ಅತಿಥಿಗಳಾಗಿ ಆಗಮಿಸಿದ್ದರು., ಆರೀಫ್ ತಂಳ್ ಬನ್ನೂರು, ಇಸ್ಮಾಯಿಲ್ ಬೊಳ್ವಾರು, ಸಿಯಾನ್ ದರ್ಬೆ, ಅಬ್ದುಲ್ ಅಝೀಝ್ ಬಪ್ಪಳಿಗೆ, ಬಿ.ಎಸ್. ಹಮೀದ್ ಬಪ್ಪಳಿಗೆ, ಬಪ್ಪಳಿಗೆ ಮಸೀದಿಯ ಅಧ್ಯಕ್ಷ ಅಬ್ದುಲ್ ಹಮೀದ್ ಲೌಲಿ, ಶಾಫಿ ಉಸ್ತಾದ್ ಕಲ್ಲೇಗ, ರವೂ- ಬಪ್ಪಳಿಗೆ ನೌಫಲ್ ಬಪ್ಪಳಿಗೆ ಮೊದಲಾದವರು ಆಗಮಿಸಿದ್ದರು. ಅನ್ವರ್ ಸ್ವಾದಿಕ್ ಮುಸ್ಲಿಯಾರ್ ಕಾರ್ಯಕ್ರಮ ನಿರ್ವಹಿಸಿದರು.

5೦ ಶೇಕಡಾ ರಿಯಾಯಿತಿ
ಡಿಎ ಅರೆಬಿಯನ್ ಬುರ್ಖಾ ಮಾಲಕ ಡಿಎ ದಾವುದ್ ಬಪ್ಪಳಿಗೆ ಮಾತನಾಡಿ ಶುಭಾರಂಭದ ಪ್ರಯುಕ್ತ ಅರೆಬಿಯನ್ ಬುರ್ಖಾದ ಮೇಲೆ ಮೇ. 31ರ ತನಕ ಶೇ.50ರಷ್ಟು ರಿಯಾಯಿತಿ ನೀಡಲಾಗುವುದು ಗ್ರಾಹಕರು ಸಹಕರಿಸಬೇಕೆಂದು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here