ರೋಟರಿ ಕ್ಲಬ್ ಪುತ್ತೂರು ಸಿಟಿಯ ಚಾರಿಟೇಬಲ್ ಟ್ರಸ್ಟ್ ನ ಪದಾಧಿಕಾರಿಗಳ ಆಯ್ಕೆ

0

ಅಧ್ಯಕ್ಷರಾಗಿ ಸುರೇಂದ್ರ ಕಿಣಿ – ಕಾರ್ಯದರ್ಶಿಯಾಗಿ ಸುಧಾಕರ ಶೆಟ್ಟಿ ಬೀಡಿನಮಜಲು – ಖಜಾಂಜಿಯಾಗಿ ಮನೋಹರ ಕೊಳಕ್ಕೆಮಾರ್

ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಸಿಟಿ ಇದರ ಚಾರಿಟೇಬಲ್ ಟ್ರಸ್ಟಿನ ನೂತನ ಸಾಲಿನ ಅಧ್ಯಕ್ಷರಾಗಿ ಸುರೇಂದ್ರ ಕಿಣಿ ಕಾರ್ಯದರ್ಶಿಯಾಗಿ ಸುಧಾಕರ ಶೆಟ್ಟಿ ಬೀಡಿನಮಜಲು ಖಜಾಂಜಿಯಾಗಿ ಮನೋಹರ ಕೊಳಕ್ಕೆಮಾರ್ ಸದಸ್ಯರಾಗಿ ಪ್ರಶಾಂತ್ ಶೆಣೈ, ಲಾರೆನ್ಸ್ ಗೋನ್ಸಾಲೀಸ್, ಜೋ ಡಿಸೋಜ, ಡಾ| ಹರಿಕೃಷ್ಣ ಪಾಣಾಜೆ, ಮಹಮ್ಮದ್ ಸಾಹೇಬ್, ಪ್ರಮೋದ್ ಮಲ್ಲಾರ ಆಯ್ಕೆಯಾಗಿದ್ದಾರೆ.


ನಿಕಟಪೂರ್ವ ಅಧ್ಯಕ್ಷರಾದ ಅರವಿಂದ ಕೃಷ್ಣ, ಕಾರ್ಯದರ್ಶಿ ಹರಿಕೃಷ್ಣ ಪಾಣಾಜೆ ಹಾಗೂ ಸದಸ್ಯರ ಸಮ್ಮುಖದಲ್ಲಿ ನಡೆದ ಕ್ಲಬ್ ನ ವಾರದ ಸಭೆಯಲ್ಲಿ
ಆಯ್ಕೆ ಪ್ರಕ್ರಿಯೆ ನಡೆಯಿತು. ಟ್ರಸ್ಟ್ ನ ನೂತನ ಅಧ್ಯಕ್ಷರಾದ ಸುರೇಂದ್ರ ಕಿಣಿರವರು ಮಾತನಾಡಿ ಟ್ರಸ್ಟ್ ನ ಮುಖಾಂತರ ನಡೆಸುವ ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿ ಎಲ್ಲರ ಸಹಕಾರ ಕೋರಿದರು. ಟ್ರಸ್ಟ್ ನ ಕಾರ್ಯದರ್ಶಿ ಸುಧಾಕರ ಶೆಟ್ಟಿ ಬೀಡಿನಮಜಲುವರು ವಂದಿಸಿದರು.

LEAVE A REPLY

Please enter your comment!
Please enter your name here