ಪುತ್ತೂರು: ಭಾರತೀಯ ಕಾರ್ಯನಿರತ ಪತ್ರಕರ್ತರ ಸಂಘ, ಆಲ್ ಇಂಡಿಯಾ ನ್ಯೂಸ್ ಪೇಪರ್ ಎಂಪ್ಲಾಯಿಸ್ ಫೆಡರೇಶನ್, ಇಂಡಿಯನ್ ಜರ್ನಲಿಸ್ಟ್ ಯೂನಿಯನ್ ಸಹಿತ ರಾಷ್ಟ್ರ ಮಟ್ಟದ 8 ಪತ್ರಕರ್ತರ ಸಂಘಟನೆಗಳ ವತಿಯಿಂದ ನವದೆಹಲಿಯ ಹೋಟೆಲ್ ಸಾಮ್ರಾಟ್ ನಲ್ಲಿ (ಮೇ.28) ಇಂದು ನಡೆದ ಪತ್ರಕರ್ತರ ಮಹಾ ಸಮ್ಮೇಳನದಲ್ಲಿ ಕುಕ್ಕೆ ಸುಬ್ರಹ್ಮಣ್ಯದ ನಿವಾಸಿ, ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಕರ್ನಾಟಕದ ಪ್ರತಿನಿಧಿಯಾಗಿ ಭಾಗವಹಿಸಿದ್ದಾರೆ. ವಿಜಯವಾಣಿ ಪತ್ರಿಕೆಯ ಹಿರಿಯ ವರದಿಗಾರರಾದ ಇವರು ಭಾರತೀಯ ಕಾರ್ಯನಿರತ ಪತ್ರಕರ್ತರ ಸಂಘದ ರಾಷ್ಟ್ರೀಯ ಮಂಡಳಿ ಸದಸ್ಯರಾಗಿದ್ದಾರೆ.
![](https://puttur.suddinews.com/wp-content/uploads/2023/05/4b027edc-d3eb-4e58-95f7-1357a295f06f.jpg)