25 ನೇ ಹುಟ್ಟುಹಬ್ಬಕ್ಕೆ 25 ಸಾವಿರ ರೂ. ದೇಣಿಗೆ – ಬಡವರ ಮನೆ ನಿರ್ಮಾಣಕ್ಕೆ ಸಹಾಯಹಸ್ತ ಚಾಚಿ ಔದಾರ್ಯತೆ ಮೆರೆದ ರಜತ್ ಬಲ್ಲಾಳ್ ಬೆಟ್ಟಂಪಾಡಿ ಬೀಡು

0

ಬೆಟ್ಟಂಪಾಡಿ: ಬೆಟ್ಟಂಪಾಡಿ ಬೀಡು ರಜತ್ ಬಲ್ಲಾಳ್ ರವರು ತನ್ನ 25 ನೇ ಹುಟ್ಟುಹಬ್ಬದ ಅಂಗವಾಗಿ ಬೆಟ್ಟಂಪಾಡಿ ಗುಂಡ್ಯಡ್ಕ ಕಾಲೊನಿ ನಿವಾಸಿ ಕಮಲರವರಿಗೆ ಮನೆ ನಿರ್ಮಾಣಕ್ಕಾಗಿ ರೂ. 25,000 ದೇಣಿಗೆ ನೀಡುವುದರ ಮೂಲಕ ಆದರ್ಶ ಮೆರೆದಿದ್ದಾರೆ. ಮೇ.29 ರಂದು ಮೊತ್ತವನ್ನು ಕಮಲರವರಿಗೆ ರಜತ್ ಬಲ್ಲಾಳ್ ಹಸ್ತಾಂತರಿಸಿದರು‌. ಈ ವೇಳೆ ಇರ್ದೆ ಬೆಟ್ಟಂಪಾಡಿ ಪ್ರಾ.ಕೃ.ಪ.ಸಹಕಾರಿ ಸಂಘದ ಅಧ್ಯಕ್ಷ ರಂಗನಾಥ ರೈ ಗುತ್ತು, ವಿಠಲ ಬಲ್ಲಾಳ್, ಜನಾರ್ಧನ ಬಲ್ಲಾಳ್, ಡಾ. ವೇದಾವತಿ ಬಲ್ಲಾಳ್, ಶಿವಕುಮಾರ್ ಬಲ್ಲಾಳ್, ಆಶಿಕ್ ಬಲ್ಲಾಳ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here